ಪೆರ್ನೆ: ಜನಮಂಗಲ ಕಾರ್ಯಕ್ರಮದಡಿ ಊರುಗೋಲು ಹಸ್ತಾಂತರ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ಇದರ ಪೆರ್ನೆ ವಲಯದ ಪೆರ್ಲಾಪು ಬಿ ಕಾರ್ಯಕ್ಷೇತ್ರದ ಮುಂಗೂರು ನಿವಾಸಿಯಾಗಿರುವ ಅಬೂಬಕ್ಕರ್ ರವರು ಪಾರ್ಶ್ವ ವಾಯು ತೊಂದರೆಯಿಂದ ಬಳಲುತ್ತಿದ್ದು, ನಡೆದಾಡಲು ಕಷ್ಟಪಡುತ್ತಿರುವ ಇವರಿಗೆ ಶ್ರೀ ಕ್ಷೇತ್ರದಿಂದ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಊರುಗೋಲು ಸೌಲಭ್ಯವು ಮಂಜೂರಾಗಿದ್ದು, ಇದನ್ನು ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಭಾರತಿ ಎಸ್ ರಾವ್ ರವರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ನವಜೀವನ ಸಮಿತಿ ಅಧ್ಯಕ್ಷ ಕುಶಾಲಪ್ಪ ಸಪಲ್ಯ, ವಲಯ ಮೇಲ್ವಿಚಾರಕರಾದ ಶಾರದಾ ಎ, ಕೃಷಿ ಮೇಲ್ವಿಚಾರಕರಾದ ಚಿದಾನಂದ್, ಸೇವಾಪ್ರತಿನಿಧಿ ಭಾರತಿ ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here