ಕರ್ನೂರ್ ಗುತ್ತು ನರಸಿಂಹ ಪಕ್ಕಳ ನಿಧನ

0

ಈಶ್ವರಮಂಗಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮುಕ್ತೇಸರರು, ಕಾಂಗ್ರೆಸ್ ಮುಖಂಡರು ಆಗಿದ್ದ ಕರ್ನೂರ್ ಗುತ್ತು ನರಸಿಂಹ ಪಕ್ಕಳ(91) ನಿಧನರಾಗಿದ್ದಾರೆ. ಆನಾರೋಗ್ಯದ ಹಿನ್ನಲೆಯಲ್ಲಿ ಅವರನ್ನು ದೇರಳಕಟ್ಟೆಯ ಕೆ ಎಸ್‌ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಅವರು ನಿಧನರಾಗಿದ್ದಾರೆ. ಮೃತರು, ಪುತ್ರರಾದ ನೆಟ್ಟಣಿಗೆ ಗ್ರಾ.ಪಂ ಸದಸ್ಯ ಶ್ರೀರಾಮ್ ಪಕ್ಕಳ, ಪುತ್ರಿ ಐಶ್ವರ್ಯ ಉದಯ್ ಶೆಟ್ಟಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು (ನಾಳೆ) ಸೆ.07ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here