ಸೆ.7ರಂದು ಪುಣ್ಚಪ್ಪಾಡಿ ನೇರೋಳ್ತಡ್ಕದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಸವಣೂರು: ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಸಮಿತಿ ಇದರ ವತಿಯಿಂದ 36ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವವು ಸೆ.7ರಂದು ರಮೇಶ್‌ ಪುದ್ವುಣ್ಣಾಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸೆ.7ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣವನ್ನು ಪ್ರಗತಿ ಪರ ಕೃಷಿಕ ಮಂಜಪ್ಪ ಶೆಟ್ಟಿ ನೂಜಾಜೆ ನೆರವೇರಿಸುವರು.ಬಳಿಕ ಶ್ರೀಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ , ಪುಣ್ಚಪ್ಪಾಡಿ ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಹಾಗೂ ದೇವಸ್ಯ ಶ್ರೀಹರಿಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ,ಗಣಹೋಮ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ವಹಿಸುವರು.ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಮೀನಾ ಇಲೆಕ್ಟ್ರಿಕಲ್ಸ್‌ ನ ಗಣೇಶ್‌ ಭಟ್‌,ಹಾವೇರಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಪ್ರದೀಪ್ ಕುಮಾರ್ ಜೆ.ನಾಯ್ಕ, ನಿವೃತ್ತ ಸೈನಿಕ ಪ್ರವೀಣ್ ರೈ ನೂಜಾಜೆ ಭಾಗವಹಿಸುವರು.ಶ್ರೀ ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಧಾರ್ಮಿಕ ಉಪನ್ಯಾಸ ನೀಡುವರು.ಸಭಾ ಕಾರ್ಯಕ್ರಮದಲ್ಲಿ ಪುಣ್ಚಪ್ಪಾಡಿ ಗ್ರಾಮದ ಸಾಧಕ ಎಸ್ಸೆಸೆಲ್ಸಿ ,ಪಿಯುಸಿ,ಪದವಿ,ಸ್ನಾತಕೋತ್ತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಲಿದೆ.

ಮಧಾಹ್ನ 12 ಗಂಟೆಗೆ ಶ್ರೀಮಹಾಗಣಪತಿ ದೇವರ ಮಹಾಪೂಜೆ ,ಬಳಿಕ ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀಮಹಾಗಣಪತಿ ದೇವರ ಮಹಾಪೂಜೆ ,ಸಂಜೆ 4.30ರಿಂದ ಶ್ರೀಗಣಪತಿ ದೇವರಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.ಬಳಿಕ ಹೊಸಗದ್ದೆ ಗೌರಿ ಹೊಳೆಯಲ್ಲಿ ಗಣಪತಿ ದೇವರ ಮೂರ್ರತಿಯ ಜಲಸ್ತಂಬನ ನಡೆಯಲಿದೆ.

ಕ್ರೀಡಾಕೂಟ
ಶ್ರೀಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕ್ರೀಡಾಕೂಟ ನಡೆಯಲಿದ್ದು,ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ 3500 ನಗದು ಹಾಗೂ ಟ್ರೋಫಿ,ದ್ವಿತೀಯ 2500 ನಗದು ಹಾಗೂ ಟ್ರೋಫಿ, ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ, ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ
.ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ 1500 ನಗದು ಹಾಗೂ ಟ್ರೋಫಿ ,ದ್ವಿತೀಯ 1000 ನಗದು ಹಾಗೂ ಟ್ರೋಫಿ,ಪುರುಷರ ವಿಭಾಗದ ಅಡ್ಡಕಂಬ ಸ್ಪರ್ಧೆಯ ವಿಜೇತರಿಗೆ 1000 ನಗದು ಬಹುಮಾನವಿದೆ. ಹಾಗೂ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಭಕ್ತಿಗೀತೆ ,ಸಂಗೀತ ಕುರ್ಚಿ,ಗೋಣಿಚೀಲ ಓಟ ,ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ,ಅಧ್ಯಕ್ಷ ಮಹೇಶ್‌ ಕೆ.ಸವಣೂರು,ಕಾರ್ಯದರ್ಶಿ ಪ್ರಮೋದ್‌ ಬೊಳ್ಳಾಜೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here