ತ್ಯಾಗರಾಜನಗರ: ರಸ್ತೆ ಗುಂಡಿ ಮುಚ್ಚಿದ ವಿ.ಹಿಂ.ಪ ಬಜರಂಗದಳ ತಿಂಗಳಾಡಿ ಘಟಕದ ಕಾರ್ಯಕರ್ತರು

0

ಪುತ್ತೂರು: ತ್ಯಾಗರಾಜನಗರದಲ್ಲಿ ಸಂಭವಿಸಿದ ಸ್ಕೂಟರ್ ಅಪಘಾತದಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳದ ವೀರಾಂಜನೇಯ ಘಟಕದ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡರವರು ನಿಧನರಾಗಿದ್ದರು. ಕೀರ್ತನ್ ಗೌಡರವರ ಸಾವಿಗೆ ಕಾರಣವಾದ ರಸ್ತೆಯ ಗುಂಡಿಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳ ತಿಂಗಳಾಡಿ ಘಟಕದ ಕಾರ್ಯಕರ್ತರು ಮುಚ್ಚುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.

ಸೆ.9ರಂದು ಮಧ್ಯರಾತ್ರಿ ಕೀರ್ತನ್ ಗೌಡರವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಅಪಘಾತಕ್ಕೀಡಾಗಿತ್ತು. ರಸ್ತೆ ಮಧ್ಯದಲ್ಲಿದ್ದ ಗುಂಡಿಯಿಂದಲೇ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸೆ.12ರ ರಾತ್ರಿ ಕೀರ್ತನ್ ಗೌಡರವರ ಗೆಳೆಯರು ಶ್ರಮದಾನದ ಮೂಲಕ ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚಿ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.

LEAVE A REPLY

Please enter your comment!
Please enter your name here