ಪಣೆಮಜಲು:ಮೇಯಲು ಬಿಟ್ಟ ದನಗಳಿಂದ ಪ್ರಯಾಣಿಕರಿಗೆ ತೊಂದರೆ-ಬೀಟ್‌ ಪೊಲೀಸರಿಗೆ ದೂರು

0

ಪುತ್ತೂರು:ದರ್ಬೆ -ಸುಬ್ರಹ್ಮಣ್ಯ ರಸ್ತೆಯ ಪಣೆಮಜಲು ಎಂಬಲ್ಲಿ ಮೇಯಲು ಬಿಟ್ಟ ದನಗಳು ರಸ್ತೆಯಲ್ಲಿ ಮಲಗಿದ್ದು, ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಸುಬ್ರಹ್ಮಣ್ಯ ಮೂಲದ ರಮೇಶ್‌ ಎಂಬವರು ಬೀಟ್‌ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

ಪಣೆಮಜಲಿನ ಮಸೀದಿ ಪಕ್ಕ ಸ್ಥಳೀಯರು ಹಗ್ಗದಿಂದ ಕಟ್ಟಿ ದನಗಳನ್ನು ಮೇಯಲು ಬಿಡಲಾಗಿದೆ.ಆದರೆ ಹಗ್ಗದ ಉದ್ದ ಹೆಚ್ಚಾಗಿದ್ದು, ದನಗಳು ದಣಿವಾರಿಸಿಕೊಳ್ಳಲು ಹೆದ್ದಾರಿಯನ್ನು ಆಶ್ರಯಿಸಿದೆ.ಇದು ತಿರುವಿನಿಂದ ಕೂಡಿದ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮಾರಕವಾಗಿ ಪರಿಣಮಿಸಿದ್ದು, ನಿರಾಳವಾಗಿ ಸಂಚರಿಸುವ ಚಾಲಕರಿಗೆ ಅಡಚಣೆಯಾಗಿದೆ.ಈ ಕುರಿತು ಸುಬ್ರಹ್ಮಣ್ಯ ಮೂಲದ ರಮೇಶ್‌ ಎಂಬವರು ಸ್ಥಳೀಯ ಬೀಟ್‌ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಹಗ್ಗ ಉದ್ದಕ್ಕೆ ಬಿಟ್ಟು ರಸ್ತೆ ಬದಿಯಲ್ಲಿ ದನಗಳನ್ನು ಮೇಯಲು ಬಿಡುವುದನ್ನು ತಡೆಯುವಂತೆ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here