Puttur: ಅಂತರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟದಲ್ಲಿ ಪ್ರಮಥ ಎಮ್. ಭಟ್ ʼಸ್ವರ್ಣ ಪದಕʼ ಸಾಧನೆ

0

ಪುತ್ತೂರು: Self Defense School of Indian Karate Mangalore Dojo ಆಯೋಜನೆಯಲ್ಲಿ ಮಂಗಳೂರಿನ ಕೋರ್ಡೆಲ್ ಚರ್ಚ್ ಹಾಲ್ ನಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟದಲ್ಲಿ Institute Of Karate and Martial Arts ಪುತ್ತೂರು ಶಾಖೆಯ ಪ್ರಮಥ ಎಮ್ ಭಟ್ ಬ್ಲ್ಯಾಕ್ ಬೆಲ್ಟ್ ವಿಭಾಗದ ಕುಮಿಟೆ ಮತ್ತು ಕಟಾದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇವರು ಸಂಸ್ಥೆಯ ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಮಾರ್ಗದರ್ಶನದಲ್ಲಿ, ಹಿರಿಯ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ದರ್ಬೆ ಕೈಗಾರಿಕಾ ಭವನ ಹಾಲ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಪ್ರಮಥ ಅವರು, ಮೈತ್ರಿ ಎಲೆಕ್ಟ್ರಿಕ್ ಕಂಪನಿಯ ಮಾಲಕರಾದ ರವಿ ನಾರಾಯಣ ಎಂ ಹಾಗೂ ಶರಾವತೀ ರವಿನಾರಾಯಣ ದಂಪತಿಯ ಪುತ್ರ.

LEAVE A REPLY

Please enter your comment!
Please enter your name here