ಅಂಜಲಿ ಸ್ಟುಡಿಯೋ ಮಾಲಕ ಅಚ್ಯುತ ಕಡ್ಯರವರಿಗೆ ಛಾಯಾ ಸಾಧಕ ಪ್ರಶಸ್ತಿ

0

ಪುತ್ತೂರು: ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಬೆಂಗಳೂರು ಕೆಎಸ್‌ವಿಪಿವಿ ಅಸೋಸಿಯೇಶನ್ ವತಿಯಿಂದ ಪುತ್ತೂರಿನ ಅಂಜಲಿ ಸ್ಟುಡಿಯೋ ಮಾಲಕ ಅಚ್ಯುತ ಕಡ್ಯರವರಿಗೆ “ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ವೃತ್ತಿಪರ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಕರ್ನಾಟಕ ಕ್ಯಾನ್ಸರ್ ಸೊಸೈಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ರಾಜ್ಯ ವಿಪ್ರ ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಕೆ.ರಮೇಶ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಪುತ್ತೂರಿನ ಅಂಜಲಿ ಸ್ಟುಡಿಯೋ ಮೂಲಕ ಫೊಟೋಗ್ರಾಫರ್ ವೃತ್ತಿಯಲ್ಲಿ 36 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮೂಲತಃ ಕಡಬ ತಾಲೂಕಿನ ಕಡ್ಯ ನಿವಾಸಿಯಾದ ಇವರು ಪತ್ನಿ ಮೈಸೂರು ವಿದ್ಯಾವರ್ಧಕ ಇಂಜಿನಿಯರ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ದಿವ್ಯರಶ್ಮಿ, ಇಂಜಿನಿಯರ್ ಆಗಿರುವ ಪುತ್ರರಾದ ಅರ್ಜುನ್ ಕಡ್ಯ, ವರುಣ್ ಕಡ್ಯ ರವರೊಂದಿಗೆ ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here