ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ಮಹಾಸಭೆ -ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷೆ ಕುಶಲ ನಾಗೇಶ್ ಪಟ್ಟೆಮಜಲು, ಕಾರ್ಯದರ್ಶಿ ರಜನಿರಾಜೇಶ್ ಸರ್ವೆದೋಳಗುತ್ತು, ಕೋಶಾಧಿಕಾರಿ ಗೀತಾ ನಾರಾಯಣ್ ಮರಿಯ

ಪುತ್ತೂರು: ಸರ್ವೆ ಶ್ರೀಗೌರಿ ಮಹಿಳಾ ಮಂಡಲದ ಮಹಾಸಭೆಯು ಸೆ.22ರಂದು ಭಕ್ತಕೋಡಿ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಮೋಹಿನಿ ರಮೇಶ್ ಭಕ್ತಕೋಡಿ ಇವರ 2024 ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಈ ಹಿಂದೆ ನಡೆದ ಕಾರ್ಯಕ್ರಮಗಳ ವರದಿಯನ್ನು ಮತ್ತು ಆಯವ್ಯಯವನ್ನು ಮಂಡಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವ ಸದಸ್ಯರ ಸಮ್ಮುಖದಲ್ಲಿ ಮಾಡಲಾಯಿತು. ಶ್ರೀಗೌರಿ ಮಹಿಳಾ ಮಂಡಲದ ನೂತನ ಅಧ್ಯಕ್ಷೆಯಾಗಿ ಕುಶಲನಾಗೇಶ್ ಪಟ್ಟೆಮಜಲು, ಕಾರ್ಯದರ್ಶಿಯಾಗಿ ರಜನಿರಾಜೇಶ್ ಸರ್ವೆದೋಳಗುತ್ತು, ಖಜಾಂಚಿಯಾಗಿ ಗೀತಾ ನಾರಾಯಣ್ ಮರಿಯ, ಉಪಾಧ್ಯಕ್ಷೆಯಾಗಿ ಭವ್ಯ ಸುಬ್ರಹ್ಮಣ್ಯ ಕರುಂಬಾರು ಆಯ್ಕೆಯಾದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ರತ್ನಾವತಿ ವಸಂತ ಎಸ್ ಡಿ ಸರ್ವದೋಳಗುತ್ತು, ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಶಂಕರನಾರಾಯಣ ಭಟ್ ಸರ್ವೆ, ಹರ್ಷಾವತಿ ಜನಾರ್ಧನ ಗೌಡ ಭಕ್ತಕೋಡಿ ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಶಂಕರ್ನಾರಾಯಣ ಭಟ್ ಸ್ವಾಗತಿಸಿದರು. ಲಲಿತಾ ಲಕ್ಷ್ಮಣ ಆಚಾರ್ಯ ಪ್ರಾರ್ಥಿಸಿದರು.ಸವಿತಾ ಪದ್ಮಯ್ಯ ಗೌಡ ಭಕ್ತಕೋಡಿ ಕಾರ್ಯಕ್ರಮ ನಿರೂಪಿಸಿ, ಸ್ವಾತಿಪ್ರಮೋದ್ ಅಲೇಕಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here