ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ ಶ್ರಮದಾನ

0

ಪುತ್ತೂರು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶ್ರೀ ವಿಷ್ಣುಯುವಶಕ್ತಿ ಬಳಗ ಮಜ್ಜಾರಡ್ಕ ಇದರ ವತಿಯಿಂದ ವಿಶೇಷ ಚೇತನರಾದ ಮೋಹನ್ ದರ್ಬೆತ್ತಡ್ಕ ಇವರಿಗೆ ನಿರ್ಮಿಸಿ ಕೊಡುತ್ತಿರುವ ಮನೆಯ ವೈಟ್ ಸಿಮೆಂಟ್ ಕೆಲಸವನ್ನು ಶ್ರಮದಾನದ ಮೂಲಕ ಮಾಡಿಕೊಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಸಂಘಟಕರರು, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ ಮಯೂರ, ಹಾಗೂ ಯತೀಶ್ ಬೆಳ್ಳಿಪ್ಪಾಡಿ, ಜಗದೀಶ್ ಕೋಡಿಯಡ್ಕ, ಪ್ರವೀಣ್ ಬರೆ, ಚೇತನ್ ಕೊಡಿಮರ, ಮನಮೋಹನ್ ಉಪ್ಪಳಿಗೆ ಹಾಗೂ ಶೈಲೇಶ್ ಬೆಳ್ಳಿಪ್ಪಾಡಿ ಶ್ರಮದಾನದಲ್ಲಿ ಭಾಗವಹಿಸಿದ್ದರು. ಸ್ವಾಮಿನಗರದ ಚಂದ್ರಿಕಾ ಜಯಕೃಷ್ಣನ್ ಮತ್ತು ಮಕ್ಕಳು ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಊಟ, ಉಪಹಾರದ ವ್ಯವಸ್ಥೆ ಮಾಡಿದ್ದರು.

LEAVE A REPLY

Please enter your comment!
Please enter your name here