ಈಶ್ವರಮಂಗಲ:ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ

0

ಬಡಗನ್ನೂರು: ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಈಶ್ವರಮಂಗಲ ಮತ್ತು ಗ್ರಾಮ ಪಂಚಾಯತ್ ನೆಟ್ಟನಿಗೆ ಮುಡ್ನೂರು ಜಂಟಿ ಆಶ್ರಯದಲ್ಲಿ  ವಿಶ್ವ ರೇಬಿಸ್ ದಿನಾಚರಣೆ ಸೆ.29 ರಂದು ಆಚರಿಸಲಾಯಿತು.

 ಕಾರ್ಯಕ್ರಮದ ಅಂಗವಾಗಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಆಯೋಜಿಸಲಾಯಿತು. ಪಾಣಾಜೆ  ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ  ಡಾ ಎಂ. ಪಿ  ಪ್ರಕಾಶ್  ಕಾರ್ಯಕ್ರಮವನ್ನು  ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸಾಕು ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡುವ ಪ್ರಯೋಜನ ಬಗ್ಗೆ ಮಾಹಿತಿ ನೀಡಿದರು. 

ಕೌಡಿಚ್ಚಾರು  ಹಿರಿಯ ಪಶು ವೈದ್ಯಕೀಯ ಪರೀಕ್ಷಕ ವೀರಪ್ಪ ಸ್ವಾಗತಿಸಿ,ವಂದಿಸಿದರು. ಈಶ್ವರಮಂಗಲ ಹಿರಿಯ ಪಶು ವೆದ್ಯಪರಿವೀಕ್ಷಕ ಬಸವರಾಜು ಕಾರ್ಯಕ್ರಮ ನಿರ್ವಹಿಸಿದರು.  ಇಲಾಖೆಯ  ಎನ್ ಜಿ ಕುಮಾರ ಕೆದಂಬಾಡಿ, ಪುಂಡರಿಕಾಕ್ಷ ಪುತ್ತೂರು, ಸರೋಜ ಈಶ್ವರಮಂಗಲ ,ಪ್ರದೀಪ್ , ಕೀರ್ತನ್ ,  ಭರತ್  ಮತ್ತು ಪಶು ಸಕಿಯರಾದ  ಕಾವ್ಯ ಹಾಗೂ ರತ್ನವತಿ ಇವರು ಲಸಿಕೆ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here