ಉಪ್ಪಿನಂಗಡಿ: ಬಿಜೆಪಿಯಿಂದ ಸ್ವಚ್ಛತಾ ಕಾರ್ಯ

0

ಉಪ್ಪಿನಂಗಡಿ: ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಬಿಜೆಪಿ ಉಪ್ಪಿನಂಗಡಿ ಶಕ್ತಿ ಕೇಂದ್ರ ಹಾಗೂ ಯುವಮೋರ್ಚ ಪುತ್ತೂರು ಗ್ರಾಮಾಂತರ ಮಂಡಲ ಇದರ ವತಿಯಿಂದ ಇಲ್ಲಿನ ಹಿರೆಬಂಡಾಡಿ ಕ್ರಾಸ್ ರಸ್ತೆಯಲ್ಲಿನ ನಾಗನಕಟ್ಟೆ ಪರಿಸರದಿಂದ ರಾಮನಗರದವರೆಗೆ ಬುಧವಾರದಂದು ಸ್ವಚ್ಚತಾ ಅಭಿಯಾನವನ್ನು ನಡೆಸಲಾಯಿತು.


ಅಭಿಯಾನದಲ್ಲಿ ಬಿಜೆಪಿ ಮುಖಂಡರಾದ ಧನಂಜಯ್ ನಟ್ಟಿಬೈಲ್, ಆದೇಶ್ ಶೆಟ್ಟಿ, ಎನ್. ಉಮೇಶ್ ಶೆಣೈ, ಪ್ರಸಾದ್ ಬಂಡಾರಿ, ವಿದ್ಯಾಧರ ಜೈನ್, ಯತೀಶ್ ಶೆಟ್ಟಿ ಕೂಟೇಲ್, ಸಚಿನ್ ಕೋಟೆ, ಶೋಭಾ ದಯಾನಂದ್, ಜಯಶ್ರೀ ಜನಾರ್ದನ್, ಉಷಾ ಮುಳಿಯ, ಉಷಾ ನಾಯ್ಕ್, ವನಿತಾ ಆರ್ತಿಲ, ಶರತ್ ಕೋಟೆ, ಉಮೇಶ್ ಶೆಣೈ, ಚಂದ್ರಶೇಖರ್ ಮಡಿವಾಳ, ಲತಾ, ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here