ದುರ್ಗಾನಗರ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿ- “ಭ್ರಾಮರಿಗೆ ಹೃದಯದ ಆರತಿ” ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ

0

ಪುತ್ತೂರು: ಮರೀಲು, ದುರ್ಗಾನಗರದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ” ಕೆ ಕೆ ಭರತ್ ಕ್ರಿಯೇಷನ್ಸ್ ಅರ್ಪಿಸುವ ‘ಭ್ರಾಮರಿಗೆ ಹೃದಯದ ಆರತಿ’ ಕನ್ನಡ ಭಕ್ತಿಗೀತೆಗಳ ಧ್ವನಿ ಅ.3 ರಂದು ಬಿಡುಗಡೆಗೊಳಿಸಲಾಯಿತು.

ದುರ್ಗಾನಗರ ದೇವಿ ಸನ್ನಿಧಿಯ ಮೊಕ್ತೇಸರರಾದ ಭಾಸ್ಕರ ಗೌಡ ದುರ್ಗಾನಗರ ಮತ್ತು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿರುವ ಕಲಾರತ್ನ ಶರತ್ ಆಳ್ವ ಚನಿಲರವರು ಬಿಡುಗಡೆಗೊಳಿಸಿದರು. ಈ ಸಂದರ್ಭ ಗಾಯಕ ರಮೇಶ್ ಕಡೇಶಿವಾಲಯ , ಭರತ್ ಕನ್ಯಾನ ಗಾಯಕಿಯರಾದ ಕಾವ್ಯಶ್ರೀ ಗಡಿಯಾರ , ಕವಿತಾ ಗಡಿಯಾರ ಹಾಗೂ ಸಾಹಿತ್ಯದಲ್ಲಿ ಸಹಕರಿಸಿದ ಸುದರ್ಶನ್ ಪುತ್ತೂರು, ಸಂಕಲನ ಚಂದ್ರೋದಯ ಜಿ .ವಿ ಮತ್ತು ಧ್ವನಿ ಮುದ್ರಣದಲ್ಲಿ ಸಹಕರಿಸಿದ ಮಿಥುನ್ ರಾಜ್ ವಿದ್ಯಾಪುರ ,ಕಬಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here