ಬೊಳುವಾರು ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ತಾಳಮದ್ದಳೆ ಅ.6ರಂದು ನಡೆಯಿತು.


ಮಧ್ಯಾಹ್ನ ದುರ್ಗಾ (ಉಳ್ಳಾಳ್ತಿ) ಮಲರಾಯ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ‘ಭೀಷ್ಮಾರ್ಜುನ ಕಾಳಗ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ಪುಟ್ಟಣ್ಣ ನೈಕ್ ಬೊಳುವಾರು ಬೈಲುರವರ ಪ್ರಾಯೋಜಕತ್ವದಲ್ಲಿ ಭಾಗವತರಾಗಿ ಎಸ್.ಎಲ್. ಗೋವಿಂದ ನಾಯಕ್ ಪಾಲೆಚ್ಚಾರು, ಶ್ರೀಪತಿ ನಾಯಕ್ ಅಜೇರು, ಚಂಡೆಯಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಅದ್ವೈತ್ ಕೃಷ್ಣ,ಪ್ರಮಥೇಶ್ ಶರ್ಮ, ಮಿಹಿರ್ ಭಟ್, ಮುಮ್ಮೇಳದಲ್ಲಿ ಕೇಶವ ಭಟ್ ಕೇಕಾನಜೆ, ಶ್ರೀಪತಿ ಕಲ್ಲೂರಾಯ, ಶ್ಯಾಮ್ ಭಟ್ ಪಕಳಕುಂಜ, ಪ್ರಸನ್ನ ಕುಮಾರ್ ಬಲ್ಲಾಳ್, ಕೇಶವ ಭಟ್ ಕೇಕಾನಜೆ ಭಾಗವಹಿಸಿದ್ದರು. ರಾತ್ರಿ ವಿಶೇಷ ದುರ್ಗಾಪೂಜೆ ನಡೆಯಿತು.

LEAVE A REPLY

Please enter your comment!
Please enter your name here