ಆಹಾರ ಇಲಾಖೆಯಿಂದ ಸಾಫ್ಟ್ ವೇರ್‌ ಬದಲಾವಣೆ-ಪಡಿತರ ಗ್ರಾಹಕರಿಗೆ ಸಮಸ್ಯೆ- ಶೀಘ್ರ ಪರಿಹರಿಸುವಂತೆ ಆಗ್ರಹ

0

ಪುತ್ತೂರು: ಆಹಾರ ಇಲಾಖೆಯಿಂದ ಸಾಫ್ಟ್ ವೇರ್‌ ಬದಲಾವಣೆಯಾದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಪಡಿತರ ವಿತರಣೆಯಲ್ಲಿ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿರಲಿಲ್ಲ. ಆದರೆ ಇಂದು ಸಾಫ್ಟ್‌ ವೇರ್‌ ತಂತ್ರಾಂಶ ಉಪಯೋಗಕ್ಕೆ ಅನುಕೂಲಕವಾಗಿ ಪರಿಣಮಿಸಿದೆ.ಆದರೂ ಅನೇಕ ಸೊಸೈಟಿಗಳಲ್ಲಿ ಸರ್ವರ್‌ ಸಮಸ್ಯೆ ಕಾಡುತ್ತಿದೆ. ಅನೇಕ ಕೇಂದ್ರಗಳಲ್ಲಿ ಸರ್ವರ್‌ ಇದ್ದರು ಜನಜಂಗುಳಿಯಿಂದ ಕೂಡಿದೆ.

ಅದರಂತೆ ಕುಂಬ್ರ, ಕೆಯ್ಯೂರು, ಕೆದಂಬಾಡಿ, ಮಾಡ್ನೂರು, ಇನ್ನೂ ಅನೇಕ ಗ್ರಾಮ ಸೊಸೈಟಿಗಳಲ್ಲಿ ಸರ್ವರ್‌ ಸಮಸ್ಯೆ ಇದ್ದು ಜನರು ಪರದಾಡುವಂತಾಗಿದೆ.ಇನ್ನೂ ಕೌಡಿಚ್ಚಾರ್‌ ಸೊಸೈಟಿಯನ್ನು ಬಂದ್‌ ಮಾಡಲಾಗಿದೆ.

ಇನ್ನೇನು ಸಾಲು ಸಾಲು ರಜೆಗಳು ಬರಲಿದ್ದು,ಇದೇ ರೀತಿ ಸರ್ವರ್‌ ಸಮಸ್ಯೆ, ಜನ ಜಂಗುಳಿಯ ಸಮಸ್ಯೆಯಾದರೆ ಅನೇಕರು ಈ ತಿಂಗಳ ಪಡಿತರ ವಿತರಣೆಯಿಂದ ಸಿಗುವ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಈ ಕುರಿತು ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here