ಮೃತರ ಗುರುತು ಪತ್ತೆಗೆ ಮನವಿ

0

ಉಪ್ಪಿನಂಗಡಿ: ಅಸ್ವಸ್ಥರಾಗಿದ್ದುಕೊಂಡು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ವರ್ಗಾಹಿಸಲ್ಪಟ್ಟಿದ್ದ 75 ರ ಹರೆಯದ ವೃದ್ದರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಅ. 17 ರಂದು ನಿಧನರಾಗಿದ್ದು, ಮೃತರ ವಾರೀಸುದಾರರ ಪತ್ತೆ ಕಾರ್ಯಕ್ಕೆ ಸಾರ್ವಜನಿಕರ ಸಹಕಾರವನ್ನು ಪೊಲೀಸರು ಯಾಚಿಸಿದ್ದಾರೆ.


ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ಸಂದರ್ಭದಲ್ಲಿ ತನ್ನ ಹೆಸರನ್ನು ಬಾಬು ಶೆಟ್ಟಿ ಎಂದು, ಸಕಲೇಶಪುರ ತಾಲೂಕು ಹಾಸನ ಜಿಲ್ಲೆ ಎಂದು ನಮೂದಿಸಿದ್ದು , ಹೆಚ್ಚಿನ ಮಾಹಿತಿಯನ್ನು ನೀಡಿರುವುದಿಲ್ಲ. ಈ ಕಾರಣಕ್ಕೆ ಮೃತದೇಹದ ವಿಲೇವಾರಿಗೆ ವಾರೀಸುದಾರರನ್ನು ಪತ್ತೆ ಹಚ್ಚುವರೇ ಅಥವಾ ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೆ ತಕ್ಷಣವೇ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕರನ್ನು 9480805362 ಈ ಮೊಬೈಲ್ ಸಂಖ್ಯೆಯಲ್ಲಿ ಸಂಪರ್ಕಿಸಬಹುದೆಂದು ಪೊಲೀಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here