ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲಾ ವಿದ್ಯಾರ್ಥಿ ಸಂಕೇತ್ ನಿಧನ

0

ನೆಲ್ಯಾಡಿ: ಶಿರಾಡಿ ಗ್ರಾಮದ ಕುದ್ಕೋಳಿ ನಿವಾಸಿ, ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಸಂಕೇತ್(14ವ.)ಅಲ್ಪಕಾಲದ ಅಸೌಖ್ಯದಿಂದ ಅ.22ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.


ಸಂಕೇತ್‌ಗೆ ನಾಲ್ಕು ದಿನದ ಹಿಂದೆ ಜ್ವರ ಹಾಗೂ ಅನಾರೋಗ್ಯ ಕಾಣಿಸಿಕೊಂಡಿದ್ದು ಉದನೆ, ಕೊಕ್ಕಡದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಸೋಮವಾರ ಉಜಿರೆಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಬೆಳಿಗ್ಗೆ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಸಂಕೇತ್ ರಾತ್ರಿ ವೇಳೆ ನಿಧನರಾಗಿದ್ದಾರೆ. ಮೃತರು ತಂದೆ ಕೃಷಿಕ ಸುಂದರ ಗೌಡ, ತಾಯಿ ಸುಂದರಿ, ಸಹೋದರ ಸಂಪತ್ ಅವರನ್ನು ಅಗಲಿದ್ದಾರೆ.

ಸಂತಾಪ:
ಬಾಲಕ ಸಂಕೇತ್ ನಿಧನಕ್ಕೆ ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ಬಿಷಪ್ ಯಾಕೂಬ್ ಮೊರ್ ಅಂತೋನಿಯಾಸ್, ಮೆನೇಜರ್ ಫಾ.ಸನ್ನಿಜಾನ್ ಹಾಗೂ ಆಡಳಿತ ಮಂಡಳಿಯವರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here