ಪುತ್ತೂರು ಗ್ರಾಮಾಂತರ ಕ್ರೀಡಾಕೂಟ: ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ 17ರ ವಯೋಮಾನದ ಬಾಲಕರ ತಂಡ ಸಮಗ್ರ ಪ್ರಶಸ್ತಿ

0

puttur: ಅ.22 ರಂದು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. 14ರ ವಯೋಮಾನದ ಬಾಲಕ ,ಬಾಲಕಿಯರ ವಿಭಾಗದಲ್ಲಿ ಸುಜನ್ ರೈ( 200 ಮೀ ತೃತೀಯ ),ದೀಕ್ಷಿತ (200 ಮೀ ತೃತೀಯ), ಅನುಷಾ( 600 ಮೀ ಪ್ರಥಮ) ಸ್ಥಾನ ಪಡೆದಿರುತ್ತಾರೆ.


17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸ್ನೇಹ (100 ಮೀ ಪ್ರಥಮ), ಫಾತಿಮತ್ ರಾಫಿಯಾ (200ಮೀ ದ್ವಿತೀಯ), ಮೇಘಶ್ರೀ (100 ಮೀ ತೃತೀಯ, ಡಿಸ್ಕಸ್ ತೃತೀಯ) ಸ್ಥಾನವನ್ನು ಪಡೆದಿರುತ್ತಾರೆ.


17ರ ವಯೋಮಾನದ ಬಾಲಕರ ವಿಭಾಗದಲ್ಲಿ, ವಿನೀತ್ ಕೆ ವಿ (ಜಾವೆಲಿನ್ ದ್ವಿತೀಯ), ಅಹಮದ್ ರಾಫಿ (ಎತ್ತರ ಜಿಗಿತ ತೃತೀಯ , ಗುಂಡೆಸೆತ ದ್ವಿತೀಯ), ತಾರಾನಾಥ (400 ಮೀ ಪ್ರಥಮ) ನಿತೇಶ್ (400 ಮೀ ತೃತೀಯ), ಸುಚಿತ್ ರೈ(3000 ಮೀ ತೃತೀಯ), ಸೃಜನ್ ಕೆ (100 ಮೀ ಪ್ರಥಮ ,200 ಮೀ ದ್ವಿತೀಯ, ಉದ್ದ ಜಿಗಿತ ತೃತೀಯ)ಸ್ಥಾನ ಪಡೆದು 17ರ ವಯೋಮಾನದ ಬಾಲಕರ ತಂಡ ಸಮಗ್ರ ಪ್ರಶಸ್ತಿಯನ್ನು ಶಾಲೆ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಸೃಜನ್ ಕೆ ವೈಯಕ್ತಿಕ ಚಾಂಪಿಯನ್ ಷಿಪ್ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here