ಸವಣೂರು: ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಆಶಾ ಬೆಳ್ಳಾರೆಯವರಿಗೆ ಸನ್ಮಾನ

0

ಪುತ್ತೂರು: ಗೊಲ್ಲ ಸಮಾಜ ಸೇವಾ ಸಂಘ ಪುತ್ತೂರು ವಲಯ, ಕಡಬ ತಾಲೂಕು ಇದರ ವತಿಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಗೊಲ್ಲ ಸಮಾಜ ಸೇವಾ ಸಂಘದ ಸದಸ್ಯೆ, ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆಯವರನ್ನು ಅ.20 ರಂದು ಸವಣೂರು ಯುವ ಸಭಾಭವನದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಗೊಲ್ಲ ಸಮಾಜ ಸೇವಾ ಸಂಘದ ಅಧ್ಯಕ್ಷ ಇ.ಎಸ್. ವಾಸುದೇವ ಇಡ್ಯಾಡಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಯಾಗಿ ಟಿ.ಆರ್. ಮಂಜುನಾಥ್ ಉಪಸ್ಥಿತರಿದ್ದರು. ಬಾಲಕೃಷ್ಣ ಬಸ್ತಿ, ಪರಮೇಶ್ವರ ಇಡ್ಯಾಡಿ, ಬಾಲಕೃಷ್ಣ ಇಚ್ಲಂಪಾಡಿ, ಸುರೇಖಾ ಕೆ, ವಸಂತಿ ಬಸ್ತಿ, ಶಾಂತರಾಮ ಕೂಡಾಲ, ಯಶೋಧ, ದಿವಾಕರ ಬಸ್ತಿ, ಕೇಶವ ಬಸ್ತಿ, ಸರಸ್ವತಿ ಪೂವ, ಗಣೇಶ್ ಪೂವ. ದಯಾನಂದ ಪಾಣಗ, ಕೃಷ್ಣಯ್ಯ ಸರ್ವೆ, ಶ್ರೀನಿವಾಸ ಬಸ್ತಿ, ಹೊನ್ನಪ್ಪ ಬಸ್ತಿ, ಯೋಗೀಶ್ ಇಡ್ಯಾಡಿ, ಪುರುಷೋತ್ತಮ ನೆಲ್ಯಾಡಿ ಉಪಸ್ಥಿತರಿದ್ದರು. ಶ್ರೀಧರ ಇಡ್ಯಾಡಿ ಸ್ವಾಗತಿಸಿ ಆನಂದ ಇಡ್ಯಾಡಿ
ವಂದಿಸಿದರು.

LEAVE A REPLY

Please enter your comment!
Please enter your name here