ಕೌಡಿಚ್ಚಾರು ರಸ್ತೆ ಬದಿಯಲ್ಲಿ ಕುರಿ ತ್ಯಾಜ್ಯ ಹಾಕಿದ ಚಾಲಕ- ಪಂಚಾಯತ್ ನಿಂದ ದಂಡ

0

ಅರಿಯಡ್ಕ: ರಾಜಸ್ಥಾನದಿಂದ ಕುರಿಯನ್ನು ಲೋಡ್ ಮಾಡಿ ಮಂಗಳೂರಿಗೆ ತಂದು ಪುನಃ ಮೈಸೂರು ಮಾರ್ಗವಾಗಿ ರಾಜಸ್ಥಾನಕ್ಕೆ‌ ತೆರಳುವ ಸಂದರ್ಭದಲ್ಲಿ ಕೌಡಿಚ್ಚಾರು ಪಲ್ಲಮದಕ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅ.23ರಂದು RJ19 GH1390 ನಂಬರಿನ ಲಾರಿಯನ್ನು ನಿಲ್ಲಿಸಿ ಅದರಲ್ಲಿ ಇದ್ದ ಗೋಣಿ,ಕುರಿಯ ತ್ಯಾಜ್ಯ ರಸ್ತೆಯ ಬದಿಯಲ್ಲಿ ಹಾಕಿದ್ದಾರೆ.

ಇದನ್ನು ಮನಗಂಡ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಕಾರ್ಯದರ್ಶಿ ಶಿವರಾಮ ಮೂಲ್ಯ, ಸಿಬ್ಬಂದಿ ಶಶಿಕುಮಾರ್, ಸ್ಥಳೀಯರಾದ ಸಚಿನ್ ಪಾಪೆ ಮಜಲು ಮತ್ತು ಗಿರೀಶ್ ರೈ ನಿರ್ಪಾಡಿ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ತ್ಯಾಜ್ಯ ರಸ್ತೆಯ ಬದಿಯಲ್ಲಿ ಹಾಕಿರುವ ಡ್ರೈವರ್ ಜಾಕೀರ್ ರವರಿಗೆ ಎಚ್ಚರಿಕೆ ನೀಡಿ ಅವರಿಂದಲೇ ತ್ಯಾಜ್ಯ ವಿಲೇವಾರಿ ಮಾಡಿಸಿ ರೂ 5000 ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here