ಫೆ.18 : ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನರಿಮೊಗರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆಯ ಮಹತ್ತರವಾದ ಶೈಕ್ಷಣಿಕ ಕಾರ್ಯಕ್ರಮವಾದ FLN ಮಕ್ಕಳ ಕಲಿಕಾ ಹಬ್ಬ ರಾಜ್ಯಾದ್ಯಂತ ಕ್ಲಸ್ಟರ್ ಮಟ್ಟದಲ್ಲಿ ನಡೆಯುತ್ತಿದ್ದು, ಪುತ್ತೂರು ತಾಲೂಕಿನ ನರಿಮೊಗರು ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಫೆಬ್ರವರಿ 18 ರಂದು ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲದಲ್ಲಿ ನಡೆಯಲಿದೆ.


ಏನಿದು FLN ಕಲಿಕಾ ಹಬ್ಬ?
ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ Fundamental Literacy and numeracy ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗಬೇಕು,ದಾಖಲಾದ ಮಕ್ಕಳು ಪ್ರತಿದಿನ ಶಾಲೆಗೆ ಹಾಜರಾಗಬೇಕು, ಹಾಜರಾದ ಮಕ್ಕಳು ವಯಸ್ಸಿಗೆ ಅನುಗುಣವಾಗಿ ನಿಗಧಿಪಡಿಸಿದ ಕಲಿಕೆಯನ್ನು ಒತ್ತಡವಿಲ್ಲದೆ ಸಾಧಿಸಬೇಕೆನ್ನುವುದು ಶಾಲಾ ಶಿಕ್ಷಣ ಇಲಾಖೆಯ ಆಶಯವಾಗಿದೆ. ಈ ಹಿನ್ನಲೆಯಲ್ಲಿ ಮೂಲಭೂತವಾಗಿ ಓದು ಬರಹ ಮತ್ತು ಸಂಖ್ಯಾ ಜ್ಞಾನದಲ್ಲಿ ಪ್ರಗತಿ ಸಾಧಿಸದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಮತ್ತು ಸಂತಸದಾಯಕ ಹಾಗೂ ಅನುಭಾವತ್ಮಕ ಕಲಿಕೆಯ ವಾತಾವರಣವನ್ನು ಪ್ರೇರೇಪಿಸಲು ಹಮ್ಮಿಕೊಂಡ ಕಾರ್ಯಕ್ರಮವೇ FLN ಕಲಿಕಾ ಹಬ್ಬ 2025.


ಕಲಿಕಾ ಹಬ್ಬದಲ್ಲಿ ಕಲಿಕೆ ಹೇಗೆ ಸಾಗುತ್ತದೆ?
ಕಲಿಕಾ ಹಬ್ಬದಲ್ಲಿ ಚಟುವಟಿಕೆಗಳು ವೈವಿದ್ಯಮಯವಾಗಿ ಸಾಗಲು ಇಲ್ಲಿ 7 ಕಾರ್ನರ್ ಗಳನ್ನು ಸೃಜಿಸಲಾಗಿದೆ. ಈ ಕಲಿಕಾ ಮೂಲೆಗಳಿಂದ ವಿಭಿನ್ನ ಕಲಿಕೆಯ ವೇಗ ಮತ್ತು ಶೈಲಿಯನ್ನು ಹೊಂದಿರುವ ಮಕ್ಕಳು ಕಲೊಕೋತ್ಸವದಲ್ಲಿ ತೊಡಗಿಕೊಳ್ಳುತ್ತಾರೆ. ವೈವಿದ್ಯಮಯ ವಿಧಾನಗಳಿಂದ ಮತ್ತು ತಂತ್ರಗಳಿಂದ ಹೆಚ್ಚು ಪ್ರಯೋಜನ ಪಡುತ್ತಾರೆ. ಕಲಿಕಾ ಆಟಗಳಿಂದ ಮತ್ತು ಚಟುವಟಿಕೆಗಳಿಂದ ಮಕ್ಕಳು ಉತ್ತೇಜನ ಪಡೆಯುತ್ತಾರೆ. ಅನುಭಾವತ್ಮಕ ಭೇಟಿ ಸಮುದಾಯದೊಂದಿಗೆ ಸಹಸಂಬಂಧ ಕಲಿಕಾ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಾರೆ.


ಕಲಿಕಾ ಕಾರ್ನರ್ ಗಳಲ್ಲಿ ಯಾವ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ?
ಗಟ್ಟಿ ಓದು,ಕಥೆ ಹೇಳುವುದು, ಕೈಬರಹ ಮತ್ತು ಕ್ಯಾಲಿಗ್ರಾಫಿ, ಸಂತೋಷದಾಯಕ ಗಣಿತ, ಟ್ರೆಷರ್ ಹಂಟ್/ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಪೋಷಕರು ಮತ್ತು ಮಕ್ಕಳ ಸಹ ಸಂಬಂಧದ ವಲಯ, ಈ ವಲಯಗಳಲ್ಲಿ ವಿಂಗಡಿಸಿ ಸಂಪನ್ಮೂಲ ವ್ಯಕ್ತಿಗಳು ಚಟುವಟಿಕೆಗಳನ್ನು ಪೋಣಿಸುತ್ತಾರೆ.


ಯಾವ ಮಕ್ಕಳು ಭಾಗವಹಿಸುತ್ತಾರೆ? ಆಯ್ಕೆ ಹೇಗೆ?
ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 5 ನೇ ತರಗತಿಯ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧಿಸದ ಸರಿಸುಮಾರು 100 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ.


ಕಲಿಕಾ ಹಬ್ಬದ ಪೂರ್ವಸಿದ್ಧತೆ ಹೇಗಿದೆ?
ಪಿಎಂಶ್ರೀ ವೀರಮಂಗಲ ಶಾಲೆಯ ಆತಿಥ್ಯದಲ್ಲಿ ನಡೆಯುವ ಈ ಕಲಿಕಾ ಹಬ್ಬವು ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಇವರ ಮಾರ್ಗದರ್ಶನ ಹಾಗೂ ಸಮನ್ವಯಾಧಿಕಾರಿ ನವೀನ್ ವೇಗಸ್ ಇವರ ನಿರ್ದೇಶನ ಮತ್ತು ನರಿಮೊಗರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಇವರ ಉಸ್ತುವಾರಿಯಲ್ಲಿ ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಪಿ ಮತ್ತು ಶಿಕ್ಷಕ ವೃಂದ ಮತ್ತು ಎಸ್ ಡಿ ಎಂ ಸಿ ಯವರ ಸಹಕಾರದೊಂದಿಗೆ ನಡೆಯಲಿದೆ. ಈ ಕಲಿಕಾ ಹಬ್ಬದ ಸಂಪನ್ಮೂಲ ವ್ಯಕ್ತಿಗಳಾಗಿ ಚರಣ್ ಕುಮಾರ್ ಮುಕ್ವೆ, ಅನಂತ ಭಕ್ತಕೋಡಿ, ದೇವಪ್ಪ ಇಡ್ಯೊಟ್ಟು,ಬಶೀರ್ ಮುಂಡೂರು, ಸತೀಶ್ ಸರ್ವೆ, ಮಾಲತಿ ಆನಡ್ಕ,ಶೋಬಾ ವೀರಮಂಗಲ ಇವರು ಭಾಗವಹಿಸಲಿದ್ದಾರೆ.
ವೀರಮಂಗಲ,ಭಕ್ತಕೋಡಿ, ಸರ್ವೆ, ಮುಂಡೂರು, ಕುರಿಯ ಇಡ್ಯೊಟ್ಡು, ಹಂಟ್ಯಾರು, ಮುಕ್ವೆ, ಆನಡ್ಕ, ಶಾಂತಿಗೋಡು, ನರಿಮೊಗರು ಶಾಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಊಟೋಪಚಾರ ಕಲಿಕಾ ಸಾಮಗ್ರಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಿಎಂಶ್ರೀ ಶಾಲೆ ಸಕಲ ಸಿದ್ಧತೆ ಗಳನ್ನು ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here