ಕಡಬ ತಾ.ಪಂ.ಕೆಡಿಪಿ ಸದಸ್ಯರಾಗಿ ಉಷಾ ಒ.ಕೆ., ಗಿರೀಶ್ ಇಚ್ಲಂಪಾಡಿ ಆಯ್ಕೆ

0

ನೆಲ್ಯಾಡಿ: ಕಡಬ ತಾ.ಪಂ.ತ್ರೈಮಾಸಿಕ ಕೆಡಿಪಿ ಸದಸ್ಯರಾಗಿ ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾ ಒ.ಕೆ.,ಹಾಗೂ ಗಿರೀಶ್ ಇಚ್ಲಂಪಾಡಿ ಆಯ್ಕೆಗೊಂಡಿದ್ದಾರೆ.
ಕಡಬ ತಾಲೂಕಿನಲ್ಲಿ ಕರ್ನಾಟಕ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕರೆಯಲಾಗುವ ತ್ರೈಮಾಸಿಕ ಕೆಡಿಪಿ ಸಮಿತಿಗೆ ಇವರನ್ನು ಆಯ್ಕೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ (ಯೋಜನಾ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ) ಮಲ್ಲಿನಾಥ ಅವರು ಆದೇಶ ಹೊರಡಿಸಿದ್ದಾರೆ. ಉಷಾ ಒ.ಕೆ.,ಅವರು ನೆಲ್ಯಾಡಿ ಗ್ರಾ.ಪಂ.ಸದಸ್ಯೆಯಾಗಿದ್ದು ವಿವಿಧ ಮಹಿಳಾ ಸಂಘಟನೆಗಳಲ್ಲೂ ಸಕ್ರೀಯರಾಗಿದ್ದಾರೆ. ಇಚ್ಲಂಪಾಡಿ ಬದನೆ ನಿವಾಸಿಯಾಗಿರುವ ಗಿರೀಶ್ ಅವರು ಕಡಬ ಬ್ಲಾಕ್ ಕಾಂಗ್ರೆಸ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.

LEAVE A REPLY

Please enter your comment!
Please enter your name here