ಮಾ.15ರಿಂದ 17 : ಪನೆಕ್ಕಳ ಜಾರತ್ತಾರು ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಾರಿಪೂಜಾ ಕಾರ್ಯಕ್ರಮ

0

ಬಡಗನ್ನೂರು :  ಜಾರತ್ತಾರು ಪನೆಕ್ಕಳ ಶ್ರೀ ಮಹಾಮಾರಿಯಮ್ಮ ಮತ್ತು ಸಹಪರಿವಾರ ದೈವಗಳ ದೇವಸ್ಥಾನದ ಪುನ‌ರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಮಾರಿಪೂಜಾ ಕಾರ್ಯಕ್ರಮವು ಮಾ.15 ರಿಂದ 17 ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ವಾಸುದೇವ ತಂತ್ರಿವರ್ಯರ ಆಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿವರ್ಯರ ನೇತೃತ್ವದಲ್ಲಿ ನಡೆಯಲಿರುವುದು. ಆ ಪ್ರಯುಕ್ತ ಭಗವದ್ಭಕ್ತರಾದ ತಾವೆಲ್ಲರೂ ಆಗಮಿಸಿ ತನು-ಮನ ಧನ ಹಾಗೂ ಸರ್ವ ವಿಧದ ಸಹಕಾರಗಳನ್ನಿತ್ತು ಶ್ರೀ ದೈವಗಳ ಪ್ರಸಾದವನ್ನು ಸ್ವೀಕರಿಸಿ. ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮಗಳು:-
ಮಾ.15ರಂದು ಸಂಜೆ ಗಂ.3 ಕ್ಕೆ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ಚಾಲನೆ. ಹೊರಕಾಣಿಕೆ ಮೆರವಣಿಗೆಯನ್ನು ಪಾಪೆಮಜಲು ಬೇಂಗತ್ತಡ್ಕ ಬ್ರಹ್ಮ ಬೈದರ್ಕಕಳ ಗರಡಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ವಾಸು ಪೂಜಾರಿ ಗುಂಡ್ಯಡ್ಕ ಚಾಲನೆ ನೀಡಲ್ಲಿದ್ದಾರೆ.ಬಳಿಕ ಹೊರಕಾಣಿಕೆ ಕಲ್ಲೇರಿ ಶ್ರೀ ವೆಂಕಟರಮಣ ಮಠ ಮಡ್ಡಂಗಳದಿಂದ ಜಾರಾತ್ತಾರಿಗೆ ಮೆರವಣಿಗೆ ಮೂಲಕ ಹಾದು ಬರಲಿದೆ.

ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ ರವರು ಉಗ್ರಾಣ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಗಂ 5 ಕ್ಕೆ ಕುಂಟಾರು ಶ್ರೀ ರವೀಶ್ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ.ರಾತ್ರಿ ಗಂ 7 ರಿಂದ ಪುಣ್ಯವಾಚನ, ಸ್ಥಳಶುದ್ದಿ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಮಣ್ಯಹಾಂತ, ಸುದರ್ಶನ ಹೋಮ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ..

ಮಾ.16 ರಂದು  ಪೂರ್ವಾಹ್ನ ಗಂಟೆ 8 ರಿಂದ  ಬ್ರಹ್ಮಕಲಶೋತ್ಸವ, ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು  10-56ರಿಂದ 12-03ರ ಮಧ್ಯದಲ್ಲಿ ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಶ್ರೀ ಅಮ್ಮನವರ ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ  ಬಳಿಕ ಅನ್ನಸಂತರ್ಪಣೆ ನಡೆಯಲಿರುವುದು.

ಸಂಜೆ ಗಂ 6 ರಿಂದ  ಶ್ರೀ ದೇವಿ ಭಜನಾ ತಂಡ ಕಲ್ಲಡ್ಕ ಇವರಿಂದ ‘ಭಜನಾ ಸೇವೆ’ ರಾತ್ರಿ ಗಂಟೆ 8-30ಕ್ಕೆ ಶ್ರೀ ಅಮ್ಮನವರ ಭಂಡಾರ ತೆಗೆದು ಮಾರಿಕಳಕ್ಕೆ ತರುವುದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂ 10 ರಿಂದ ಪುತ್ತೂರು ಮಣಿವಂಶಿ ಮ್ಯೂಸಿಕ್ ಡಿ. ಕೆ. ಸುಂದರ ನೆಲ್ಲಗುಂಡಿ ಮತ್ತು ಬಳಗದಿಂದ ಭಕ್ತಿ ರಸ ಮಂಜರಿ’ ನಡೆಯಲಿದೆ.

ಮಾ 17 ರಂದು ಬೆಳಿಗ್ಗೆ ಗಂ 4-30ಕ್ಕೆ ಅಮ್ಮನವರನ್ನು ಗುಂಡದಲ್ಲಿ ಪ್ರತಿಷ್ಠಾಪಿಸುವುದು 5.30 ಕ್ಕೆ ಅಮ್ಮನವರ ದೂತರಿಗೆ ಬಲಿ ನೀಡುವುದು.ಮಧ್ಯಾಹ್ನ ಗಂ 12 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂ 4-00ಕ್ಕೆ ಶ್ರೀ ಅಮ್ಮನವರ ಭಂಡಾರವನ್ನು ಗುಡಿಗೆ ಕೊಂಡೊಯ್ದು ಪ್ರತಿಷ್ಠಾಪಿಸುವ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here