ಪುತ್ತೂರು: ಸಂಟ್ಯಾರ್ ಸರಸ್ವತಿ ಪುರಂನಲ್ಲಿ ಇತ್ತೀಚೆಗೆ ಸರಸ್ವತಿ ಎಜ್ಯುಕೇಷನ್ ಸೊಸೈಟಿಯ ಕಟ್ಟಡ ಸರಸ್ವತಿ ಸಧನದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸೃಜನಾತ್ಮಕ ಬೆಳವಣಿಗೆಗೆ ಸಹಕಾರಿಯಾಗುವಂತ 5 ದಿನಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರ ಅಭಿವ್ಯಕ್ತ-2025 ಇದರ ಸಮಾರೋಪ ಸಮಾರಂಭವು ಎ.15ರಂದು ನಡೆಯಿತು.
ಶಿಬಿರದಲ್ಲಿ ಆಶಯ ಗೀತೆಗಳು, ವಿಜ್ಞಾನದೊಂದಿಗೆ ನಾವು-ನೀವು, ಮೋಜಿನ ಗಣಿತ, ನವರಸದೊಂದಿಗೆ ಅಭಿನಯ -ನಾಟ್ಯ, ನಾಟಕ -ಅಭಿನಯ, ಯೋಗಾಸನ, ಪ್ರಾಣಾಯಾಮ, ಆಟ-ರಂಗಾಟ, ಕತೆ ಕಟ್ಟಿ ನೋಡು, ಸ್ಪೋಕನ್ ಇಂಗ್ಲೀಷ್, ಪೇಪರ್ ಕ್ರಾಪ್ಟ್, ತೆಂಗಿನ ಗರಿಯಲ್ಲಿ ಕ್ರಾಪ್ಟ್, ಕಸದಿಂದ ರಸ, ಔಷದೀಯ ಎಲೆಗಳ ಪರಿಚಯ-ಮಾತುಕತೆ, ನಾಯಕತ್ವ ತರಬೇತಿ, ಶ್ಲೋಕ, ರಾಮಾಯಣ -ಮಹಾಭಾರತದತ್ತ ಒಂದು ನೋಟ, ಮಾತು-ಕತೆ, ಮುಖವಾಡ ತಯಾರಿ ಮೊದಲಾದ ತರಬೇತಿಗಳು ಶಿಬಿರದಲ್ಲಿ ನಡೆಯಲಿದೆ. ಉತ್ತಮ, ಅನುಭವೀ ಶಿಕ್ಷರನ್ನು ಒಳಗೊಂಡಿರುವ ಸಂಪನ್ಮೂಲ ವ್ಯಕ್ತಿಗಳಿಂದ ಗುಣಮಟ್ಟದಲ್ಲಿ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಮೊಬೈಲ್ ಹಾಗೂ ಟಿವಿ ಮಕ್ಕಳ ಬದುಕನ್ನುಕಿತ್ತುಕೊಳ್ಳುತ್ತದೆ. ಅವುಗಳಿಂದ ದೂರು ಇದ್ದಷ್ಡು ಜೀವನದಲ್ಲಿ ಬೆಳೆದು ಸಾಧಿಸಲು ಸಹಕಾರಿಯಾಗಲಿದೆ. ಇದಕ್ಕಾಗಿ ರಜಾ ದಿನಗಳಲ್ಲಿ ಬಳಸಿಕೊಳ್ಳಬೇಕು. ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ ಎಂದರು.
ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ.ಮಾತನಾಡಿ, ಪ್ರತಿಷ್ಠಿತ ಶಾಲೆಗಳಿಗೆ ಕಳುಹಿಸುವುದರಿಂದ ಮಾತ್ರ ಸಾಧನೆ ಮಾಡುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಪೋಷಕರು ಹೊರಬರಬೇಕು. ಸುಪ್ತವಾದ ಪ್ರತಿಭೆ ಎಲ್ಲಾ ಮಕ್ಕಳಲ್ಲಿದೆ. ಅವರಿಗೆ ಅವಕಾಶ ನೀಡುವ ಕೆಲಸವಾಗಬೇಕು ಎಂದರು.
ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ಆಜೇರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್, ಸರಸ್ವತಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ರಾಜಗೋಪಾಲ ಬಾಳೆಗುಳಿ, ಪ್ರಧಾನ ಕಾರ್ಯದರ್ಶಿ ರಮೇಶ್ ಪ್ರಭು, ಶ್ರೀಸರಸ್ವತಿ ಮಹಿಳಾ ಮಂಡಳಿ ಅಧ್ಯಕ್ಷೆ ರಂಜಿತಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ;
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ಎಂ., ಶಿಬಿರದ ಸಂಯೋಜಕ ಗಣೇಶ್ ನಾಯಕ್ ನೆಕ್ಕರೆ, ಶಿಕ್ಷಕಿ ಭವ್ಯ ಮರಿಕೆಯವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು 110 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಮಲ್ಲಿಕಾ ಕುಕ್ಕಾಡಿ ಸ್ವಾಗತಿಸಿದರು. ಸಂಯೋಜಕ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ನಾರಾಯಣ ನಾಯಕ್ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು.