ಪುಣಚ ಕೆಲ್ಲಾಳಿ: ಸಮೃದ್ಧಿ ನಿಲಯದ ಗೃಹಪ್ರವೇಶ

0

ಪುಣಚ: ಪುಣಚ ಗ್ರಾಮದ ಕೆಲ್ಲಾಳಿ ವಿಮಲ ಮತ್ತು ದೇವಣ್ಣ ನಾಯ್ಕರವರು ನೂತನವಾಗಿ ನಿರ್ಮಿಸಿರುವ ಮನೆ “ಸಮೃದ್ಧಿ ನಿಲಯ” ಇದರ ಗೃಹಪ್ರವೇಶ ಎ.30ರಂದು ಜರಗಿತು. ಬೆಳಿಗ್ಗೆ ಜನಾರ್ದನ ಭಟ್ ದೋಣಿಮೂಲೆ ರವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ ನಡೆದು ಮದ್ಯಾಹ್ನ ಭೋಜನ ನಡೆಯಿತು.
ಸಮಾರಂಭದಲ್ಲಿ ಕುಟುಂಬಸ್ಥರು, ಬಂಧುಗಳು, ಮಿತ್ರರು, ಊರ ಪರಊರ ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು. ಮನೆ ಮಾಲಕರಾದ ದೇವಣ್ಣ ನಾಯ್ಕ ಕೆಲ್ಲಾಳಿ, ಅವರ ಪತ್ನಿ ವಿಮಲ, ಪುತ್ರಿಯರಾದ ತೃಷಾ, ಭವ್ಯಶ್ರೀ ಅತಿಥಿಗಳನ್ನು ಸ್ವಾಗತಿಸಿಕೊಂಡು ಸತ್ಕರಿಸಿದರು.

LEAVE A REPLY

Please enter your comment!
Please enter your name here