ಪುತ್ತೂರು: ಇಲ್ಲಿನ ತೆಂಕಿಲ ಕಮ್ನೂರು ನಿವಾಸಿ ವೆಂಕಪ್ಪ (58 ವ) ಎಂಬವರು ವಿಷ ಪದಾರ್ಥ ಸೇವಿಸಿ ದರ್ಬೆಯ ಮಂಗಳ ಬಾರ್ ಸಮೀಪದ ಮೈದಾನದಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ವೆಂಕಪ್ಪ ಅವರು ಮೇ.1ರಂದು ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಹಿಂದಿರುಗಿಲ್ಲ. ಮೇ.2ರಂದು ಅವರು ದರ್ಬೆ ಮಂಗಳ ಬಾರ್ ಬಳಿಯ ಮೈದಾನದಲ್ಲಿ ಮಲಗಿಕೊಂಡಿದ್ದ ಸ್ಥಿತಿಯಲ್ಲಿದ್ದ ಮಾಹಿತಿ ತಿಳಿದು ಮನೆಯವರು ಹೋಗಿ ನೋಡುವಾಗ ಅವರ ಉಸಿರಾಟ ನಿಂತು ಹೋಗಿತ್ತು. ಅವರು ಮಲಗಿದ್ದ ಪಕ್ಕದಲ್ಲೇ ನೀರಿನ ಬಾಟಲಿಗೆ ನೇರಳೆ ಬಣ್ಣದ ಹುಡಿಯನ್ನು ಹಾಕಿದ್ದುದು ಬೆಳಕಿಗೆ ಬಂದಿದ್ದು, ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರಿ ಸುಮಾವತಿ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.