ನೆಲ್ಯಾಡಿ: ನೆಲ್ಯಾಡಿಯ ಹೃದಯ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ಅಮ್ಮ ಕ್ಯಾಂಟೀನ್ ಮಾಲಕ ಗಿರೀಶ್ ಪೂಜಾರಿ (38ವ.)ರವರು ಜೂ.2ರಂದು ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರೀಶ್ ಪೂಜಾರಿ ಅವರು ಮೂಲತಃ ಮಡಂತ್ಯಾರ್ ಬಳಿಯ ದಡ್ಡು ನಿವಾಸಿಯಾಗಿದ್ದು ಕಳೆದ 7 ವರ್ಷಗಳಿಂದ ನೆಲ್ಯಾಡಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದರು. ಗಿರೀಶ್ ಪೂಜಾರಿ ಅವರ ಸರಳತೆ, ಸೇವಾ ಮನೋಭಾವನೆ ಹಾಗೂ ಶುದ್ಧ ಆಹಾರದಿಂದ ಪ್ರಸಿದ್ಧಿ ಪಡೆದಿದ್ದ ಈ ಕ್ಯಾಂಟೀನ್ ಸ್ಥಳೀಯರ ವಿಶ್ವಾಸ ಗಳಿಸಿತ್ತು. ನೆಲ್ಯಾಡಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ವಾಸವಾಗಿದ್ದ ಗಿರೀಶ್ ಪೂಜಾರಿ ಅವರು ಮೇ 31ರಂದು ತಮ್ಮ ಮೂಲ ಮನೆ ಮಡಂತ್ಯಾರ್ಗೆ ಹೋಗಿದ್ದರು. ಅಲ್ಲಿ ಜೂ.2ರಂದು ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮೃತರು ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ.