ಎಪಿಎಂಸಿ ಶಾಖೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಕಾರ್ಯಕ್ರಮ

0

ದಾಖಲೆಯ ವ್ಯವಹಾರ, ಗುರಿ ಮೀರಿದ ಸಾಧನೆ -ಚಿದಾನಂದ ಬೈಲಾಡಿ

ಪುತ್ತೂರು: ಎಲ್ಲರ ಸಹಕಾರದಿಂದ ಸಂಘ ನಿರಂತರವಾಗಿ ಬೆಳವಣಿಗೆ ಆಗುತ್ತಿದೆ. ಕಳೆದ ವರ್ಷ 2023-24ರಲ್ಲಿ ಸಂಘದ ಒಟ್ಟು ವ್ಯವಹಾರ 542 ಕೋಟಿ ಆಗಿತ್ತು. ಈ ವರ್ಷ 744 ಕೋಟಿ ರೂಪಾಯಿಷ್ಟು ದಾಖಲೆಯ ವ್ಯವಹಾರ ಆಗಿದೆ. ಒಟ್ಟು ವ್ಯಹವಾರದಲ್ಲಿ 202 ಕೋಟಿ ರೂಪಾಯಿ ಹೆಚ್ಚು ವ್ಯವಹಾರ ನಡೆಸುವ ಮೂಲಕ ಖಾಸಗಿ ಸಹಕಾರಿ ಸಂಘದಲ್ಲೂ ಸ್ಪರ್ಧಾತ್ಮಕ ವ್ಯವಹಾರ ನಡೆಯುತ್ತಿದೆ. ಇದರಲ್ಲಿ ಸಿಬ್ಬಂದಿಗಳ ಕಾರ್ಯಕ್ಷಮತೆ ಇದೆ ಎಂದು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಹೇಳಿದರು.

ಪುತ್ತೂರು ಎಪಿಎಂಸಿ ಸಹಿತ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಎಸ್‌ಎಮ್‌ಟಿ ಪುತ್ತೂರು, ಕಾಣಿಯೂರು, ಬೆಳ್ಳಾರೆ, ವಿಟ್ಲ ಶಾಖೆಯನ್ನೊಳಗೊಂಡ ಎಪಿಎಂಸಿ ಮಾಣಯಿ ಆರ್ಚ್ ಕಟ್ಟಡದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿರುವ ಎಪಿಎಂಸಿ ಶಾಖೆ ಸ್ಥಳಾಂತರಗೊಂಡು 6ನೇ ವರ್ಷಕ್ಕೆ ಪಾರ್ದಾರ್ಪಣೆಯ ಶುಭ ಸಂದರ್ಭದಲ್ಲಿ ಜೂ.5ರಂದು ಸಂಘದ ಕಚೇರಿಯಲ್ಲಿ ನಡೆದ ಗಣಪತಿ ಹೋಮ, ಲಕ್ಷ್ಮೀಪೂಜೆಯ ಬಳಿಕ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಸಂಘದ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ ಜಿನ್ನಪ್ಪ ಗೌಡ ಮಳವೇಲು, ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ, ಶ್ರೀಧರ್ ಗೌಡ ಕಣಜಾಲು, ಸುಂದರ ಗೌಡ ನಡುಬೈಲು, ಸಂಧ್ಯಾ ಶಶಿಧರ್, ತಿಮ್ಮಪ್ಪ ಗೌಡ ಕೆಮ್ಮಾಯಿ, ಒಕ್ಕಲಿಗ ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ನಿವೃತ್ತ ಕಮಾಡೆಂಟ್ ರಾಮದಾಸ್ ಗೌಡ, ಮಾಜಿ ನಿರ್ದೇಶಕರಾದ ಸಾವಿತ್ರಿ ಕೆ, ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು, ಜಯರಾಮ ಗೌಡ, ಪ್ರೇಮಾನಂದ ಗೌಡ, ಹಿತೈಷಿಗಳಾದ ಕಿಶೋರ್ ಕುಮಾರ್ ನೆಲ್ಲಿಕಟ್ಟೆ, ಶಿವರಾಮ ಮತಾವು, ಪುಟ್ಟಣ್ಣ ಗೌಡ, ಗಿರಿಜಾ ಪುಟ್ಟಣ್ಣ, ರಾಧಾಕೃಷ್ಣ ಗೌಡ, ಎಪಿಎಂಸಿ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಗಣಪತಿ ಹೋಮ ಮತ್ತು ಲಕ್ಷ್ಮಿಪೂಜೆಯು ಅರ್ಚಕ ವೇ.ಮೂ.ಹರೀಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here