ಪುತ್ತೂರು: ಹಿಂದೂ ಸಂಘಟನೆ ನಾಯಕ ಅರುಣ್ ಕುಮಾರ್ ಪುತ್ತಿಲ ಅವರ ಗಡಿಪಾರು ಪ್ರಸ್ತಾವನೆಗೆ ಸಂಬಂಧಿಸಿದ ವಿಚಾರಣೆಯು ಪುತ್ತೂರು ಸಹಾಯಕ ಆಯುಕ್ತರ (ಎಸಿ) ನ್ಯಾಯಾಲಯದಲ್ಲಿ ಬುಧವಾರ ನಡೆಯಿತು. ಗಡಿಪಾರಿಗೆ ಸೂಕ್ತ ಹಾಗೂ ಸಮರ್ಪಕ ದಾಖಲೆಗಳನ್ನು ಸಲ್ಲಿಸಲು ಪೊಲೀಸರು ವಿಫಲವಾದ ಕಾರಣ, ಎಸಿಯವರು ವಿಚಾರಣೆಯನ್ನು ಜೂನ್ 27ಕ್ಕೆ ಮುಂದೂಡಿದ್ದಾರೆ.
ಅರುಣ್ ಪುತ್ತಿಲ ಅವರ ಪರವಾಗಿ ಪುತ್ತೂರಿನ ಹಿರಿಯ ವಕೀಲರಾದ ನರಸಿಂಹ ಪ್ರಸಾದ್ ಅವರು ಹಾಜರಾಗಿ ವಾದ ಮಂಡಿಸಿದರು. ಪುತ್ತಿಲ ಅವರನ್ನು ಗಡಿಪಾರು ಮಾಡಲು ಪೊಲೀಸರು ಒದಗಿಸಿದ ದಾಖಲೆಗಳು ಅಪೂರ್ಣವಾಗಿವೆ ಮತ್ತು ಸಮರ್ಪಕವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.