ರಾಮಕುಂಜ: ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಜೂ.9ರಂದು ಸಂಜೆ ರಾಮಕುಂಜ ಗ್ರಾ.ಪಂ.ಕಚೇರಿ ಮುಂಭಾಗ ನಡೆದಿದೆ.
ತೋಟದ ಮನೆ ನಿವಾಸಿ ಪರಮೇಶ್ವರ ಗಾಯಗೊಂಡವರಾಗಿದ್ದಾರೆ. ಇವರು ಆತೂರಿನಿಂದ ರಾಮಕುಂಜದ ಕಡೆಗೆ ತನ್ನ ಬೈಕ್ನಲ್ಲಿ ಹೋಗುತ್ತಿದ್ದವರು ರಾಮಕುಂಜ ಗ್ರಾ.ಪಂ.ಕಚೇರಿ ಮುಂಭಾಗ ತಲುಪುತ್ತಿದ್ದಂತೆ ಗ್ರಾ.ಪಂ.ಕಚೇರಿ ಕಡೆಯಿಂದ ಮುಖ್ಯರಸ್ತೆಗೆ ಆನಂದ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು ಡಿಕ್ಕಿಯಾಗಿದೆ.
ಘಟನೆಯಲ್ಲಿ ಪರಮೇಶ್ವರ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಘಟನೆ ಕುರಿತು ದೊಡ್ಡ ಉರ್ಕ ನಿವಾಸಿ ಕರುಣಾಕರ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.