ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿ, ಶುಗರ್, HBA1C, ಕೊಲೆಸ್ಟ್ರಾಲ್, ಬಿಎಂಡಿ, ನ್ಯುರೋಪಥಿ, ಕ್ಯಾಲ್ಸಿಯಂ ಉಚಿತ ತಪಾಸಣೆ

0

ಪುತ್ತೂರು: ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್ ಡಯಾಬೆಟಿಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರಾಕ್ಟ್  ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಮಾಸಿಕ ಥೈರಾಯಿಡ್ ಗ್ರಂಥಿಯ ತಪಾಸಣಾ ಶಿಬಿರ, ಶುಗರ್(GRBS),HBA1C, ಕೊಲೆಸ್ಟ್ರಾಲ್, ಬಿಎಂಡಿ, ನ್ಯುರೋಪಥಿ, ಕ್ಯಾಲ್ಸಿಯಂ ಉಚಿತ ತಪಾಸಣೆಯು ಜೂ.12ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ಡಾ.ನಝೀರ್ ಅಹಮದ್ ರವರಲ್ಲಿ ಸಲಹೆ ಪಡೆದುಕೊಂಡರು.

ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನ ಡಾ.ನಝೀರ್ ಅಹಮದ್ ರವರು ಸ್ವಾಗತಿಸಿ, ಪ್ರಸ್ತುತ ವರ್ಷ ಕ್ಲಿನಿಕ್ ಹಮ್ಮಿಕೊಂಡ ಆರೋಗ್ಯ ಶಿಬಿರಗಳಿಗೆ ಸಹಕಾರವಿತ್ತ ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು, ವಿವಿಧ ಕಂಪೆನಿಗಳ ಸಹಕಾರವನ್ನು ಸ್ಮರಿಸಿದರು ಜೊತೆಗೆ ಕ್ಲಿನಿಕ್ ಹಮ್ಮಿಕೊಂಡ ಈ ಆರೋಗ್ಯ ಶಿಬಿರಗಳಿಗೆ ಹಾಜರಾಗಿ ಪ್ರಯೋಜನ ಪಡೆದುಕೊಂಡ ಫಲಾನುಭವಿಗಳನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪುತ್ತೂರು ಕಾರ್ಯದರ್ಶಿ ದಾಮೋದರ್ ಕೆ.ಎ, ಸದಸ್ಯರಾದ ದತ್ತಾತ್ರೇಯ ರಾವ್, ಪರಮೇಶ್ವರ ಗೌಡ, ಸದಾನಂದ ನಾಯ್ಕ್, ರೋಟರ್ಯಾಕ್ಟ್ ಪುತ್ತೂರು ಅಧ್ಯಕ್ಷ ಸುಬ್ರಮಣಿ, ನಿಯೋಜಿತ ಅಧ್ಯಕ್ಷ ವಿನೀತ್, ಮಾಜಿ ಅಧ್ಯಕ್ಷ ಗಣೇಶ್ ಕಲ್ಲರ್ಪೆರವರು ಉಪಸ್ಥಿತರಿದ್ದರು. ಟೊರೆಂಟ್ ಕಂಪೆನಿಯ ಚೇತನ್ ಶೆಟ್ಟಿ, ಇಪ್ಕಾ ಕಂಪನಿಯ ಶ್ರೀಜನ್ ಹಾಗೂ ವಿನಯ್, ಆಲ್ಕೆಮ್ ಕಂಪನಿಯ ಭೀಮ್, ಸಿಸ್ಟೋಫಿಕ್ ಕಂಪೆನಿಯ ದೀಪಕ್, ಎಂಕ್ಯೂರ್ ಕಂಪೆನಿಯ ಪ್ರದೀಪ್, ಸನ್ ಫಾರ್ಮಾದ ಗೌತಮ್, ಅಗಿಲಾಸ್ ಲ್ಯಾಬ್, ಡಾ.ನಝೀರ್ ಅಹಮದ್ ಡಯಾಬಿಟಿಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.

ಡಾ.ನಝೀರ್ ರವರಿಗೆ ಅಭಿನಂದನೆ…
ರೋಟರಿ ಪುತ್ತೂರು ಪ್ರಸ್ತುತ ವರ್ಷ ಕ್ಲಬ್ ಸದಸ್ಯರ ಸಹಕಾರದಿಂದ ಅನೇಕ ಅತ್ತ್ತುತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದೆ. ಪ್ರಸ್ತುತ ವರ್ಷದ ಕನಸಿನ ಪ್ರಾಜೆಕ್ಟ್ ಎನಿಸಿರುವ ಮೆಮೋಗ್ರಾಫಿ ಸೆಂಟರ್ ಲೋಕಾರ್ಪಣೆಯಾಗಲಿದೆ. ವರ್ಷಪೂರ್ತಿ ಅನೇಕ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಜನರ ಮೆಚ್ಚುಗೆಯನ್ನು ಗಳಿಸಿದ ಡಾ.ನಝೀರ್ ಅಹಮದ್ ರವರು ರೋಟರಿ ಪುತ್ತೂರು ಇದರ ಸಕ್ರಿಯ ಸದಸ್ಯರೆನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ರವರು ಡಾ.ನಝೀರ್ ಅಹಮದ್ ರವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here