ಉಪ್ಪಿನಂಗಡಿ: ಇಲ್ಲಿನ ಹೋಟೆಲ್ ಆದಿತ್ಯ ಬಳಿ ಇರುವ ಸೂರ್ಯಂಬೈಲು ಸಂಕೀರ್ಣದಲ್ಲಿ ನೂತನ ಪುಸ್ತಕ ಮಾರಾಟ ಮಳಿಗೆ ‘ವಿವೇಕಾರುಣ್ಯ ಬುಕ್ಸ್’ ಜೂ.14ರಂದು ಬೆಳಿಗ್ಗೆ 10ಗಂಟೆಗೆ ಶುಭಾರಂಭಗೊಳ್ಳಲಿದೆ.
ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಗೌರವಾಧ್ಯಕ್ಷ ಶಂಕರನಾರಾಯಣ ಭಟ್ ಬೊಳ್ಳಾವು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಬಿಎಸ್ಎಫ್ನ ನಿವೃತ್ತ ಡೆಪ್ಯುಟಿ ಕಮಾಂಡೆಂಟ್, ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ಇದರ ರಾಜ್ಯಾಧ್ಯಕ್ಷರೂ, ಉಪ್ಪಿನಂಗಡಿ ಅಮೂಲ್ಯ ಹೆಚ್.ಪಿ.ಗ್ಯಾಸ್ ಏಜನ್ಸಿ ಮಾಲಕರೂ ಆದ ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಸುನಿಲ್ಕುಮಾರ್ ದಡ್ಡು ಭಾಗವಹಿಸಲಿದ್ದಾರೆ.
ನೂತನ ಪುಸ್ತಕ ಮಳಿಗೆಯಲ್ಲಿ ಲೇಖನ ಸಾಮಗ್ರಿಗಳು, ವಿವಿಧ ಪುಸ್ತಕಗಳು, ಕಚೇರಿ, ಶಾಲೆಗಳಿಗೆ ಬೇಕಾದ ಪುಸ್ತಕಗಳು ಲಭ್ಯವಿದೆ ಎಂದು ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.