ಅರಿಯಡ್ಕ: ಕನ್ನಯ ಕುಟುಂಬದ ಯಜಮಾನ, ಕೃಷಿಕ ಆರ್ವಾರ ಪದ್ಮಯ್ಯ ಗೌಡ (91 ವ) ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ಕನ್ನಯ ಕುಟುಂಬದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಮೃತರು ಧರ್ಮ ಪತ್ನಿ ಲಕ್ಷ್ಮಿ, ಪುತ್ರರಾದ ಜನಾರ್ದನ ಗೌಡ,ಕ್ಯಾ.ನಾಗೇಶ್ ಗೌಡ, ಅಶೋಕ್ ಗೌಡ ಮತ್ತು ಸುರೇಶ್ ಗೌಡ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಆರ್ವಾರ ದಲ್ಲಿ ಜೂ.13ರಂದು ನಡೆಯಲಿದೆ.