ನೆಲ್ಯಾಡಿ: ವಲಯ ಬಂಟರ ಸಂಘದ ಕಾರ್ಯಕಾರಿ ಸಭೆ ಜೂ.14ರಂದು ಸಂಘದ ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋಂತಿಲ ಅವರ ಮನೆಯಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಪ್ರತಾಪ್ಚಂದ್ರ ರೈ ಕುದ್ಮಾರುಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಸದಸ್ಯರಾದ ರಮೇಶ್ ಶೆಟ್ಟಿ ಬೀದಿ, ಚಂದ್ರಶೇಖರ್ ಶೆಟ್ಟಿ ಪಟ್ಟೆ, ಚಂದ್ರಶೇಖರ್ ರೈ ರಾಮನಗರ, ಯಾದವ ಶೆಟ್ಟಿ ರಾಮನಗರ, ನಮಿತಾ ಎಸ್ ಶೆಟ್ಟಿ ಪರಾರಿ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ಸುಭಾಷ್ ಶೆಟ್ಟಿ ಪುರ ಮತ್ತಿತರರು ಉಪಸ್ಥಿತರಿದ್ದರು.
