ಮಹಾಲಿಂಗೇಶ್ವರ ದೇವಸ್ಥಾನ ಗೋ ಶಾಲೆಗೆ ಅಗತ್ಯತೆ ಪೂರೈಸುವಲ್ಲಿ ಈಶ್ವರ ಭಟ್ ಪಂಜಿಗುಡ್ಡೆ!

0

ಪುತ್ತೂರು: ಸ್ನೇಹದ ನಿಜವಾದ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾವನೆಗಳು ಮತ್ತು ಆಲೋಚನೆಗಳು ಮಾತ್ರ ಹೇಳಬಲ್ಲವು. ನಿಜವಾದ ಪ್ರೀತಿಗೆ ಮುಖಗಳ ಅಗತ್ಯವಿಲ್ಲ, ನಮ್ಮ ಬಗ್ಗೆ ಯೋಚಿಸುವ ಮನಸ್ಸೇ ನಿಜವಾದ ನೆನಪುಗಳು. ಇದಕ್ಕೆ ಸಾಕ್ಷಿ ಎಂಬಂತೆ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಶಾಲೆಯ ಅಗತ್ಯತೆಯನ್ನು ಪೂರೈಸುವ ನಿಟ್ಟಿನಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ತಾನೆ ಕುದ್ದು ನಿಂತು ಕೆಲಸ ಕಾರ್ಯವನ್ನು ಮಾಡುತ್ತಿದ್ದಾರೆ.


ಪ್ರತಿ ನಿತ್ಯ ಮನೆಯ ಹಟ್ಟಿಯಲ್ಲಿ ನಸುಕಿನ ಜಾವ ನಾಲ್ಕೈದು ಹಸುಗಳ ಹಾಲನ್ನು ತಾನೇ ಸ್ವತಃ ಕರೆದು ಹಾಲಿನ ಡೈರಿ ಮತ್ತು ಹೊಟೇಲ್‌ಗೆ ನೀಡುತ್ತಿರುವ ಅನುಭವಿ ಹೈನುಗಾರಿಕರಾಗಿರುವ ಈಶ್ವರ ಭಟ್ ಪಂಜಿಗುಡ್ಡೆಯವರು ದೇವಸ್ಥಾನದ ಗೋ ಶಾಲೆಗೂ ಒಂದು ಹೊಸ ರೂಪವನ್ನು ನೀಡಿದ್ದಾರೆ. ಇತ್ತೀಚೆಗಷ್ಟೆ ಗೋವುಗಳಿಗೆ ವಿಶಾಲವಾದ ಹೆಚ್ಚು ಗಾಳಿ ಬೆಳಕು ಸಿಗಬೇಕಂದು ಕಾಮಧೇನು ಗೋ ಶಾಲೆಯನ್ನು ಪಕ್ಕದ ಮಂಟಪಕ್ಕೆ ಸ್ಥಳಾಂತರಿಸಿ ಶಾಸಕರ ಮೂಲಕ ಉದ್ಘಾಟಿಸಿದ್ದಾರೆ. ಈ ಸಂದರ್ಭ ಗೋ ಶಾಲೆಯಲ್ಲಿ ಗಾಳಿ ಮಳೆ ಬಂದಾಗ ನೀರಿನ ಹನಿ ಒಳಗೆ ಬರುತ್ತದೆ ಮತ್ತು ಪಕ್ಷಿಗಳು ಗೋವುಗಳಿಗೆ ತೊಂದರೆ ಕೊಡಬಹುದೆಂದು ಆವರಣಕ್ಕೆ ಶೀಟು ಮತ್ತು ನೆಟ್‌ಗಳ ಅಳವಡಿಕೆ ಕಾರ್ಯ ಆರಂಭಿಸಿದ್ದು, ಈ ಕುರಿತು ತಾನೆ ಕುದ್ದು ನಿಂತು ಕೆಲಸ ಕಾರ್ಯಗಳಿಗೆ ಸಲಹೆ ನೀಡುತ್ತಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದ್ದಿಲ್ಲದೆ ದೇವಳದ ಎಲ್ಲಾ ಕೆಲಸ ಕಾರ್ಯಗಳನ್ನು ಗಮನಿಸುತ್ತಿರುವುದಕ್ಕೆ ಭಕ್ತರಿಂದ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here