ಪುತ್ತೂರು: ಅಗ್ನಿಶಾಮಕದಳ ಪುತ್ತೂರು ಸಿಬ್ಬಂದಿಗಾಗಿ 25 ರೈನ್ ಕೋಟ್ ಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಧ್ಯಕ್ಷ ವಾಮನ್ ಪೈ ಅವರ ಉಪಸ್ಥಿತಿಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಮಳೆಗಾಲ ಸಂದರ್ಭ ಸಾರ್ವಜನಿಕರಿಗೆ ತುರ್ತು ಕಾರ್ಯನಿರ್ವಹಿಸಲು ಅನುಕೂಲ ಮಾಡುವ ನಿಟ್ಟಿನಲ್ಲಿ ವರ್ತಕರ ಸಂಘದ ಸದಸ್ಯರು ಸಹಕರಿಸಿದ್ದಾರೆ. ಅಗ್ನಿಶಾಮಕದಳದ ಸೇವೆ ವರ್ತಕರಿಗೂ ಅತೀ ಅಗತ್ಯ, ಇವರ ಸೇವೆಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿ ಎಂದು ಅಧ್ಯಕ್ಷರು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಟಿ ವಿ ಮನೋಜ್, ಉಪಾಧ್ಯಕ್ಷರು ರವಿಕೃಷ್ಣ ಕಲ್ಲಾಜೆ, ಕೋಶಾಧಿಕಾರಿ ಉಲ್ಲಾಸ್ ಪೈ ಸದಸ್ಯರಾದ M G ರಫೀಕ್, ಹಾಗೂ ಸದಸ್ಯರು ಸಹಕರಿಸಿದ್ದಾರೆ.
