ಸವಣೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಗಣಪತಿ ವಿಗ್ರಹಕ್ಕೆ ಶಿಲ್ಪಿ ತಾರಾನಾಥ ಆಚಾರ್ಯ ಪರ್ಲಡ್ಕ ಇವರ ಕಛೇರಿಯಲ್ಲಿ ಮುಹೂರ್ತ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನ ಗುತ್ತು,ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ನಾಯ್ಕ ಸೊರಕೆ,ಮುಂಡೂರು ಗ್ರಾಮ ಪಂಚಾಯತ್ ಸದಸ್ಯೆ ರಸಿಕ ರೈ ಮೇಗಿನ ಗುತ್ತು,ಸ್ವಸ್ತಿಕ್ ಭಂಡಾರಿ ಮೇಗಿನ ಗುತ್ತು,ರಾಘವ ನಾಯ್ಕ ನೆಕ್ಕಿಲು,ಶಿಲ್ಪಿ ತಾರಾನಾಥ ಆಚಾರ್ಯ ಪರ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.