ಈಶ್ವರಮಂಗಲ:ಶ್ರೀ ಗಜಾನನ ಹಿರಿಯ ಪ್ರಾಥಮಿಕ ಶಾಲೆ ಪಾಳ್ಯತ್ತಡ್ಕ ಇಲ್ಲಿನ 2025-26ನೇ ಶೈಕ್ಷಣಿಕ ಸಾಲಿನ ಮಂತ್ರಿಮಂಡಲದ ರಚನೆಯನ್ನು ಮಾಡಲಾಯಿತು.
ಶಾಲಾ ವಿದ್ಯಾರ್ಥಿ ನಾಯಕನಾಗಿ ಹಿತೇಶ್ .ಎಚ್ ಏಳನೇ ತರಗತಿ ಹಾಗೂ ಉಪನಾಯಕಿಯಾಗಿ ಚಿನ್ಮಯಿ ಎನ್ ಆಯ್ಕೆಯಾದರು.ಸಚಿವ ಸ್ಥಾನಕ್ಕೆ ವಿದ್ಯಾರ್ಥಿಗಳನ್ನು ನೇಮಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಶಿವರಾಮ ಶರ್ಮ . ಪಿ ಹಾಗೂ ನಿವೃತ್ತ ಅಧ್ಯಾಪಕರಾದ ಆನಂದ ರೈ . ಎಸ್ ಪ್ರಮಾಣ ವಚನ ನಿರ್ವಹಿಸಿಕೊಟ್ಟರು .ಮಂತ್ರಿಮಂಡಲದ ರಚನೆ, ಪ್ರಾಮುಖ್ಯತೆ ಹಾಗೂ ಕೆಲಸ ಕಾರ್ಯಗಳ ಕುರಿತು ಮುಖ್ಯಗುರುಗಳಾದ ಎನ್ ನರೇಂದ್ರ ಭಟ್ ಅವರು ತಿಳಿಸಿಕೊಟ್ಟರು .ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.