ಕೌಡಿಚ್ಚಾರು: ಧರ್ಮ ಶಿಕ್ಷಣದ ಉದ್ಘಾಟನಾ ಸಮಾರಂಭ

0

ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ- ಸುಬ್ರಹ್ಮಣ್ಯ ನಟ್ಟೋಜ

ಅರಿಯಡ್ಕ: ಗುರು ಕುಲ ಶಿಕ್ಷಣ ಪದ್ಧತಿ ಬ್ರಿಟಿಷರಿಂದ ನಾಶವಾಗಿದೆ. ಇಂದಿನ ಶಿಕ್ಷಣ ಪಠ್ಯಪುಸ್ತಕಗಳಲ್ಲಿ ದೇಶಭಕ್ತಿ ಕಾಣಸಿಗುವುದಿಲ್ಲ ಎಂದು ತಾಲೂಕು ಧರ್ಮ ಶಿಕ್ಷಣ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯಪಟ್ಟರು.

ಅವರು ಜೂ 22 ರಂದು ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಸಭಾಭವನದಲ್ಲಿ ಧರ್ಮ ಶಿಕ್ಷಣ ಸಮಿತಿ ಏರ್ಪಡಿಸಿದ್ದ ಧರ್ಮ ಶಿಕ್ಷಣದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿ,ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿದ ಬ್ರಿಟಿಷ್ ಅಧಿಕಾರಿಗಳನ್ನು ವೈಭವೀಕರಿಸುವ ಶಿಕ್ಷಣ ಇನ್ನೂ ಕೂಡ ನಮ್ಮ ಪಠ್ಯ ಪುಸ್ತಕಗಳಲ್ಲಿ ಇದೆ. ಮನುಷ್ಯನನ್ನು ಮನುಷ್ಯತ್ವನ್ನಾಗಿ ಮಾಡುವ ಶಿಕ್ಷಣ ನಮಗೆ ಬೇಕಾಗಿದೆ. ಇಂದಿನ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ದೇಶಪ್ರೇಮ ಎದ್ದು ಕಾಣಬೇಕು. ಹಿಂದೂ ಧರ್ಮದ ರಕ್ಷಣೆ ಗೋಸ್ಕರ ಇಂದಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ.ಹಿಂದೂ ಎಂದಾಗ ರೋಮಾಂಚನ ಆಗಬೇಕು.ಜಗದ್ಗುರು ಶಂಕರಾಚಾರ್ಯರು ಹಿಂದೂ ಧರ್ಮದ ಬಗ್ಗೆ ನೀಡಿರುವ ಸಂದೇಶಗಳನ್ನು ಅಪ್ಪಣೆ ಎಂದು ಪರಿಗಣಿಸಿ ಪರಿಪಾಲನೆ ಮಾಡುವ ಕಾರ್ಯ ಪ್ರತಿಯೊಬ್ಬ ಹಿಂದೂವಿನಲ್ಲಿ ಆಗಬೇಕು.ಈ ನಿಟ್ಟಿನಲ್ಲಿ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿಯವರ ಮಾರ್ಗ ದರ್ಶನದಲ್ಲಿ ಧರ್ಮಾಭ್ಯುದಯ ಧರ್ಮ ಶಿಕ್ಷಣ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ತಾಲೂಕು ಧರ್ಮ ಶಿಕ್ಷಣದ ಸಂಚಾಲಕ ಸುಬ್ರಮಣ್ಯ ನಟ್ಟೋಜ ಕರೆ ನೀಡಿದರು.


ಧರ್ಮ ಶಿಕ್ಷಣಕ್ಕೆ ಶ್ರೀ ಕೃಷ್ಣನ ಆಶೀರ್ವಾದ ಇರಲಿ: ವಾಸು ಪೂಜಾರಿ ಗುಂಡ್ಯಡ್ಕ
ಕಾರ್ಯಕ್ರಮವನ್ನು ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಗೌರವಾಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ಪೀಳಿಗೆಗೆ ಧರ್ಮ ಶಿಕ್ಷಣದ ಅವಶ್ಯಕತೆ ಇದ್ದು, ಈ ಶುಭ ಕಾರ್ಯಕ್ಕೆ ಶ್ರೀ ಕೃಷ್ಣನ ಆಶೀರ್ವಾದ ಇರಲಿ ಎಂದು ಶುಭ ಹಾರೈಸಿದರು.


ನಾವು ಸೋತಿದ್ದೇವೆ ನಮ್ಮ ಪೀಳಿಗೆಗೆ ಸೋಲಾಗಬಾರದು: ದಂಬೆಕಾನ ಸದಾಶಿವ ರೈ
ಧರ್ಮ ಶಿಕ್ಷಣ ತಾಲೂಕು ಸಮಿತಿ ಅಧ್ಯಕ್ಷ ಸದಾಶಿವ ರೈ ದಂಬೆಕಾನರವರು,ಮಾತನಾಡಿ ಪ್ರತಿಯೊಬ್ಬ ಹಿಂದೂವಿಗೂ ಧಾರ್ಮಿಕ ಶಿಕ್ಷಣದ ಅವಶ್ಯಕತೆ ಇದೆ . ಧಾರ್ಮಿಕ ಶಿಕ್ಷಣ ಸಿಗದೇ ನಾವು ಸೋತಿದ್ದೇವೆ. ಆದರೆ ನಮ್ಮ ಪೀಳಿಗೆಗೆ ಸೋಲಾಗಬಾರದು ಎಂದು ಶುಭ ಹಾರೈಸಿದರು


ಧರ್ಮದ ತಿಳುವಳಿಕೆ ನೀಡುವ ಕೆಲಸ ನಿರಂತರವಾಗಿರಲಿ:ಸದಾಶಿವ ಮಣಿಯಾಣಿ ಕುತ್ಯಾಡಿ
ಗ್ರಾಮದೈವ ಧೂಮಾವತಿ ದೈವಸ್ಥಾನ ಕುತ್ಯಾಡಿ ಇದರ ಪ್ರಧಾನ ಕರ್ಮಿ ಸದಾಶಿವ ಮಣಿಯಾಣಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ವಿವಿಧ ಮಠಗಳ ಸ್ವಾಮಿಗಳು, ಧಾರ್ಮಿಕ ಮುಖಂಡರುಗಳು ಆಶೀರ್ವಚನ ನೀಡಿದ್ದಾರೆ. ಇಂತಹ ಪುಣ್ಯದ ಮಣ್ಣಿನಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವುದು ಸಂತಸ ತಂದಿದೆ. ಇಂದಿನ ಮಕ್ಕಳು ಧರ್ಮದೆಡೆಗೆ ಸಾಗಲಿ ಎಂದು ಶುಭ ಹಾರೈಸಿದರು.


ದುಷ್ಟ ಆಚಾರ ವಿಚಾರಗಳನ್ನು ದೂರ ಮಾಡುವ: ಬಾಲಕೃಷ್ಣ ಬೋರ್ಕರ್
ಧರ್ಮ ಶಿಕ್ಷಣ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಕೋಡಿಂಬಾಡಿ ಮಾತನಾಡಿ, ದುಷ್ಟ ಶಕ್ತಿಗಳನ್ನು, ದುಷ್ಟ ಆಚಾರ ವಿಚಾರಗಳನ್ನು ದೂರ ಮಾಡಿ, ಭವ್ಯ ಭಾರತವನ್ನು ಕಟ್ಟಬೇಕಿದೆ. ಭವಿಷ್ಯದ ಜನಾಂಗವನ್ನು ನಿರ್ಮಿಸುವ ಸಲುವಾಗಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿದ್ದೇವೆ. ಈ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.


ಆಧ್ಯಾತ್ಮಿಕ ಅರಿವು ಮೂಡಿಸುವ ಕಾರ್ಯ :ರಾಮದಾಸ್ ರೈ ಮದ್ಲ
ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಅಧ್ಯಕ್ಷ ರಾಮದಾಸ್ ರೈ ಮದ್ಲ ರವರು ಮಾತನಾಡಿ, ಧರ್ಮದ ಬಗ್ಗೆ ಪೋಷಕರು ಸುತತ ಪ್ರಯತ್ನ ಪಟ್ಟಾಗ ಮಕ್ಕಳಲ್ಲಿ ಆಧ್ಯಾತ್ಮಿಕ ಅರಿವು ಮೂಡುತ್ತದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪೋಷಕರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಶುಭ ಹಾರೈಸಿದರು.


ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯ:ದೀಪಕ್ ಕುಲಾಲ್
ಧರ್ಮ ಶಿಕ್ಷಣ ಸಮಿತಿ ಕೌಡಿಚ್ಚಾರು ಇದರ ಅಧ್ಯಕ್ಷ ದೀಪಕ್ ಕುಲಾಲ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಧರ್ಮ ಶಿಕ್ಷಣದ ಕಾರ್ಯ ನಡೆಯುತ್ತಿದೆ. ಗ್ರಾಮದ ಪ್ರತಿಯೊಂದು ಹಿಂದೂವಿನ ಮನೆಯ ಮಕ್ಕಳನ್ನು ಕರೆತಂದು ಧಾರ್ಮಿಕ ಶಿಕ್ಷಣ ನೀಡುವುದರ ಜೊತೆ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದು ಒಂದು ದಿನದ ಕೆಲಸವಲ್ಲ. ನಿರಂತರ ಸಂಪರ್ಕವನ್ನು ಇಟ್ಟು ಕೊಂಡು ಮುಂದೆ ಸಾಗುವ ಎಂದು ಆಶಿಸಿದರು.


ಗೌರವಾರ್ಪಣೆ:
ಧರ್ಮ ಶಿಕ್ಷಣದ ಶಿಕ್ಷಕರಾದ ವೆಂಕಟೇಶ್ ಪ್ರಸಾದ್ ಕುಂಟಾಪು ಕುರಿಂಜ, ಗೌರಿಶಂಕರ ಮರತ್ತ ಮೂಲೆ, ಪ್ರಮೋದ್ ನಾಯಕ್ ಕೇಪುಳುಕಾನ, ದಯಾನಂದ ಬೈರಮೂಲೆ, ಶಾಂಭವಿ ಕುತ್ಯಾಡಿ, ಉಷಾ ನಾಯಕ್ ಕೇಪುಳಕಾನ, ವೇದಾವತಿ ಹೊಸಗದ್ದೆ, ಮತ್ತು ಯಕ್ಷಿತಾ ಮರತ್ತಮೂಲೆ ರವರನ್ನು ಶಾಲು ಹಾಕಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಕುತ್ಯಾಡಿ, ವಿಶ್ವನಾಥ ರೈ ಕುತ್ಯಾಡಿ, ಕುಶಾಲಪ್ಪ ಗೌಡ ಮಡ್ಯಂಗಳ,ವಸಂತ ಕುಮಾರ್ ಕೌಡಿಚ್ಚಾರು, ಅಪ್ಪಯ್ಯ ನಾಯ್ಕ ಬಪ್ಪಪುಂಡೇಲು,ಉದಯ ಕುಮಾರ್ ಆಕಾಯಿ, ವಸಂತ್ ಕುಲಾಲ್ ಆಕಾಯಿ, ದುರ್ಗಾ ಪ್ರಸಾದ್ ಕುತ್ಯಾಡಿ, ಗಿರೀಶ್ ಗೌಡ ಪಾಪೆ ಮಜಲು,ವಿಜಯ ಭಾರತಿ ಮಡ್ಯಂಗಳ, ಸುಧಾ ಆಕಾಯಿ, ಭಾರತಿ ವಸಂತ್ ಕೌಡಿಚ್ಚಾರು, ಪುಷ್ಪಲತಾ ಮರತ್ತಮೂಲೆ,ಕುಂಞರಾಮ ಮಣಿಯಾಣಿ ಕುತ್ಯಾಡಿ, ಪೂವಪ್ಪ ನಾಯ್ಕ ಕುತ್ಯಾಡಿ, ಹರೀಶ್ಚಂದ್ರ ಆಚಾರ್ಯ ಹೊಸಗದ್ದೆ, ಕೃಷ್ಣ ಕುಲಾಲ್ ಕೌಡಿಚ್ಚಾರು, ಪ್ರತೀಕ್ ಪೂಜಾರಿ ಆಕಾಯಿ, ಗಂಗಾಧರ್ ನಾಯ್ಕ ಮಡ್ಯಂಗಳ, ಚಂದ್ರ ಜಿ ಕುತ್ಯಾಡಿ, ನಾರಾಯಣ ನಾಯ್ಕ ಚಾಕೋಟೆ, ಹರೀಶ್ ಮಣಿಯಾಣಿ ಕುತ್ಯಾಡಿ, ಕರುಣಾಕರ ಗೌಡ ಆಚಾರಿ ಮೂಲೆ , ಕೊರಗಪ್ಪ ಗೌಡ ಮಡ್ಯಂಗಳ ,ಸುರೇಶ್ ರೈ ಮಡ್ಯಂಗಳ,ದಯಾನಂದ ಗೌಡ ಆಕಾಯಿ ,ಜನಾರ್ಧನ ಪೂಜಾರಿ ಬಳ್ಳಿಕಾನ ,ನಾಗೇಶ್ ನಾಯ್ಕ ಗಂಗುಕುಮೇರು , ಶೇಷಪ್ಪ ನಾಯ್ಕ ಮಾಯಿಲ ಕೊಚ್ಚಿ, ಮಮತಾ ಪಾಪೆ ಮಜಲು, ಹೇಮಲತಾ ಬಳ್ಳಿಕಾನ, ಭಾರತಿ ಹೊಸ ಗದ್ದೆ ಸಹಕರಿಸಿದರು.
ಅಕ್ಷರ,ತ್ರಿಶಾನಿ, ಅನುಷಾ ಪ್ರಾರ್ಥಿಸಿ, ತಿಲಕ್ ರೈ ಕುತ್ಯಾಡಿ ಸ್ವಾಗತಿಸಿ, ಶಾಂಭವಿ ಕುತ್ಯಾಡಿ ವಂದಿಸಿದರು.ಕೀರ್ತಿ ಮಾಯಿಲಕೊಚ್ಚಿ ನಿರೂಪಿಸಿದರು.

LEAVE A REPLY

Please enter your comment!
Please enter your name here