ಕುಂಬ್ರ:  ಬಿಜೆಪಿ ನೆ.ಮುಡ್ನೂರು ಮಹಾಶಕ್ತಿ ಕೇಂದ್ರದಿಂದ ವಿಶ್ವ ಯೋಗ ದಿನಾಚರಣೆ 

0

ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ನೆಟ್ಟಣಿಗೆ ಮೂಡ್ನೂರು  ಮಹಾಶಕ್ತಿ ಕೇಂದ್ರ ದ ವತಿಯಿಂದ ಕುಂಬ್ರ ಶ್ರೀರಾಮ ಭಜನಾ ಮಂದಿರದ ಸಭಾಂಗಣದಲ್ಲಿ 11ನೇ ವರ್ಷದ ವಿಶ್ವ ಯೋಗ ದಿನಾಚರಣೆಯನ್ನು ಜೂ .22 ರಂದು ಆಚರಿಸಲಾಯಿತು .

 ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶಾಖೆಯ ಸಹ ಸಂಚಾಲಕರಾಗಿರುವ ಅಶ್ವಿನಿ  ಮತ್ತು ಮುರಳೀಧರ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನೆಟ್ಟಣಿಗೆ ಮುಡ್ನೂರು ಮಹಾಶಕ್ತಿ ಕೇಂದ್ರದ  ಅಧ್ಯಕ್ಷರಾದ  ರಾಜೇಶ್ ರೈ ಪರ್ಪುಂಜ, ಟೆಲಿಕಾಂ ಸಲಹಾ ಸಮಿತಿ ಜಿಲ್ಲಾ ಸದಸ್ಯ ನಿತೀಶ್ ಶಾಂತಿವನ ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹಾಗೂ ವಿಕಸಿತ ಸಂಕಲ್ಪ ಅಭಿಯಾನದ ಮಂಡಲ ಸಹ ಸಂಚಾಲಕ ರತನ್ ರೈ ಕುಂಬ್ರ,  ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಕೆ, ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ  ಸಂತೋಷ್ ಮಣಿಯಾಣಿ ಹಾಗೂ  ಪಕ್ಷದ ಪ್ರಮುಖರು  ಹಾಗೂ ಕಾರ್ಯಕರ್ತರು ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನವೋದಯ ಶಾಖೆ ಕುಂಬ್ರ ಇದರ ಯೋಗ ಬಂದುಗಳು ಉಪಸ್ಥಿತರಿದ್ದರು. ಹರೀಶ್ ರೈ ಜಾರತ್ತಾರು ಸ್ವಾಗತಿಸಿ, ರತನ್ ರೈ ಕುಂಬ್ರ ವಂದಿಸಿದರು.

LEAVE A REPLY

Please enter your comment!
Please enter your name here