ಅಧ್ಯಕ್ಷೆ: ಪಾವನ ವಿ. ರೈ ಮುಂಡಾಳಗುತ್ತು, ಕಾರ್ಯದರ್ಶಿ: ಸಂಧ್ಯಾ ಡಿ.ರೈ ಮಾಣಿಪ್ಪಾಡಿ, ಕೋಶಾಧಿಕಾರಿ: ಪುಷ್ಪಾವತಿ ಎಸ್. ಗೌಡ ಪಟ್ಲಮೂಲೆ
ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕುಂಬ್ರ ವಲಯ ಹಾಗೂ ಸನ್ಯಾಸಿಗುಡ್ಡೆ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ 4ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯು ಆ.8ರಂದು ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.

ಇದರ ಅಂಗವಾಗಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಪಾವನ ವಿನೋದ್ ಕುಮಾರ್ ರೈ ಮುಂಡಾಳಗುತ್ತು, ಕಾರ್ಯದರ್ಶಿಯಾಗಿ ಸಂದ್ಯಾ ದಿನಕರ ರೈ ಮಾಣಿಪ್ಪಾಡಿ, ಕೋಶಾಧಿಕಾರಿಯಾಗಿ ಪುಷ್ಪಾವತಿ ಶೀನಪ್ಪ ಗೌಡ ಪಟ್ಲಮೂಲೆರವರುಗಳನ್ನು ಆಯ್ಕೆ ಮಾಡಲಾಯಿತು. ಸಮಿತಿ ಸದಸ್ಯರುಗಳಾಗಿ ರೇಖಾ ಆರ್.ಗೌಡ ಕೆರೆಮೂಲೆ, ಸೌಮ್ಯ ಎಸ್.ರೈಮಾಣಿಪ್ಪಾಡಿ, ಅಶ್ವಿನಿ ಎಸ್.ರೈ ಕುರಿಕ್ಕಾರ, ರೂಪಾ ಸಿ.ರೈ ಅಮೈ, ಪುಷ್ಪಾ ದಿನೇಶ್ ಪೂಜಾರಿ ಬೋಳೋಡಿ, ಶಕುಂತಳಾ ಎಸ್.ಚೌಟ ಪಟ್ಟೆತ್ತಡ್ಕ, ಅಮಿತಾ ಬಾಬು ಕೋರಂಗ, ವೀಣಾ ಆರ್.ರೈ ಬೆದ್ರುಮಾರು, ಉಮಾ ಎಸ್.ರೈ ಬೆದ್ರುಮಾರು, ಗೀತಾ ಸಂತೋಷ್ ರೈ ಇದ್ಪಾಡಿರವರುಗಳನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಆಯ್ಕೆ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಸನ್ಯಾಸಿಗುಡ್ಡೆ ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಚಿತ್ರ: ಪಾವನ ವಿ.ರೈ, ಸಂದ್ಯಾ ಡಿ.ರೈ,ಪುಷ್ಪಾವತಿ ಎಸ್.ಗೌಡ