ಅಭಿನಂದನೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ ಕಾರ್ಯಕ್ರಮ
ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಮುಂಡೂರು ಬಿಲ್ಲವ ಗ್ರಾಮ ಸಮಿತಿಯ ಸನ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆಯ ಕಾರ್ಯಕ್ರಮ ಸಂಘದ ಅಧ್ಯಕ್ಷ ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಜೂ.1ರಂದು ಮುಂಡೂರು ಶ್ರಿ ಮೃತ್ಯುಂಜಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಮೂರ್ತೆದಾರ ಕೂಸಪ್ಪ ಪೂಜಾರಿ ಕುರೆಮಜಲು, ಮಹಾರಕ್ತದಾನಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು,
ಕನ್ನಡ ಧಾರವಾಹಿಯ ಸೇರಿದಂತೆ ತುಳು ಸಿನಿಮಾದ ಧರ್ಮ ದೈವ, ಧರ್ಮಚಾವಡಿ ಇದರ ನಾಯಕ ನಟ ರವಿಸ್ನೇಹಿತ್ ನಡುಬೈಲುಗುತ್ತು ಇವರುಗಳನ್ನು ಸನ್ಮಾನಿಸಲಾಯಿತು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಗಣೇಶ್ ಸಾಲ್ಯಾನ್ ಪಜಿಮಣ್ಣು, ಸಿ.ಎ ಬ್ಯಾಂಕ್ ಮುಂಡೂರು ಇದರ ಆಡಳಿತ ಸಮಿತಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ನಯನಾ ಗಣೇಶ್ ಸಾಲ್ಯಾನ್ ಪಜಿಮಣ್ಣು, ಅವಿಭಾಜಿತ ದ.ಕ
ಉಡುಪಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಪ್ರತಿನಿಧಿಗಳು ಮತ್ತು ನೌಕರರ ಕ್ರೀಡಾ ಕೂಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸತೀಶ್ ಹಿಂದಾರು ಇವರನ್ನು ಅಭಿನಂದನಾ ಪತ್ರದೊಂದಿಗೆ ಅಭಿನಂದಿಸಲಾಯಿತು.
ಶೈಕ್ಷಣಿಕವಾಗಿ ರಾಜ್ಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ 2025 ರ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 625ರಲ್ಲಿ 620 ಅಂಕಗಳಿಸಿ ರಾಜ್ಯಕ್ಕೆ 6ನೇ ಸ್ಥಾನ ಪಡೆದ ಗ್ರೀಷ್ಮಾ, ಬಿನ್. ಪುಷ್ಪಾ ರಾಜ ಸಾಲ್ಯನ್ ನಡುಬೈಲುಗುತ್ತು, ಸ್ಕೌಟ್ಸ್ & ಗೈಡ್ಸ್ ವಿಭಾಗದ ಬುಲ್ ಬುಲ್ ವಿಭಾಗದಲ್ಲಿ ರಾಜ್ಯಪಾಲರಿಂದ ವಿಶೇಷ ಗೌರವ ಪಡೆದ ಅಮೃತ, ಬಿನ್. ಸರಿತಾ ಜಗದೀಶ್ ಅಮೀನ್ ನಡುಬೈಲು ಗುತ್ತು ಇವರುಗಳನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿಯಲ್ಲಿ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆಗೊಂಡ ಹರ್ಷ, ಸಿಂಚನ, ಪ್ರದೀಪ್, ಗೌತಮ್ ಹಾಗೂ ಬಿ.ಇ.ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ ಸುಪರ್ಣ ನಾಡಾಜೆ, ಬಿನ್.ಪುಷ್ಪಾ ಸುದರ್ಶನ್ ಸಾಲ್ಯಾನ್ ನಾಡಾಜೆ ಇವರನ್ನು ಗೌರವಿಸಲಾಯಿತು ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ತೇರ್ಗಡೆಗೊಂಡು ವಿದ್ಯಾಭ್ಯಾಸ ಮುಂದುವರಿಸುತ್ತಿರುವ 8 ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಪ್ರಿ.ಕೆ.ಜಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ ಮತ್ತು ಹಿರಿಯರಾದ ಬಾಲಕೃಷ್ಣ ಸಾಲ್ಯಾನ್ ನಡುಬೈಲು ಗುತ್ತು ಇವರು ದೀಪ ಬೆಳಗಿಸಿದರು. ವೇದಿಕೆಯಲ್ಲಿ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷರು ಬಿಲ್ಲವ ಸಂಘದ ಉಪಾಧ್ಯಕ್ಷೆ ವಿಮಲ ಸುರೇಶ್, ಗುರುಮಂದಿರದ ಕಾರ್ಯ ನಿರ್ವಹಣಾಧಿಕಾರಿ ಉದಯ ಕುಮಾರ್ ಕೋಲಾಡಿ, ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಬೀರ್ನಹಿತ್ಲು, ಗ್ರಾಮ ಸಮಿತಿಯ ಹಿರಿಯರಾದ ಅಣ್ಣಿ ಪೂಜಾರಿ ಹಿಂದಾರ್, ಮಹಿಳಾ ವೇದಿಕೆಯ ಗ್ರಾಮ ಸಮಿತಿಯ ಅಧ್ಯಕ್ಷೆ ಚಂದ್ರಿಕಾ ಚಂದ್ರಶೇಖರ ಕುರೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸತೀಶ್ ಹಿಂದಾರು, ನಿಶಾಂತ್ ಕುರೆಮಜಲು, ಗೀತಾ ಕುರೆಮಜಲು, ನಿಶಾ ಕುರೆಮಜಲು ಸನ್ಮಾನಿತ ಪರಿಚಯ ವಾಚಿಸಿ, ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ ಕುರೆಮಜಲು, ಮಾಧವ ಸಾಲ್ಯಾನ್, ಶಿವಗಿರಿ ಕುರೆಮಜಲು, ಸಜ್ಜನ್ ಕುಮಾರ್, ಕನ್ನರ್ನೂಜಿ ಮತ್ತು ಬಾಲಕೃಷ್ಣ ಪೂಜಾರಿ ಪೆರೆಯಡ್ಕ, ನೀಲಪ್ಪ ಪೂಜಾರಿ ಕುರೆಮಜಲು, ಅಶೋಕ್ ಕುಮಾರ್ ಕುರೆಮಜಲು ವಿವಿಧ ರೀತಿಯಲ್ಲಿ ಸಹಕರಿಸಿದರು. ಅನಿಲ್ ಕುಮಾರ್ ಕನ್ನರ್ನೂಜಿ ಸ್ವಾಗತಿಸಿ, ಸತೀಶ್ ಹಿಂದಾರ್ ವಂದಿಸಿ, ಶಿಕ್ಷಕಿಯರಾದ ಲೀಲಾವತಿ, ಲವಕುಮಾರ್ ನಾಡಾಜೆ, ದೀಕ್ಷಿತಾ, ಜೀವನ್ ಕುಮಾರ್ ಪುಳಿಂಕೆತಡಿ ಕಾರ್ಯಕ್ರಮವನ್ನು ನಿರ್ವಹಿಸಿದರು.