ನಿಡ್ಪಳ್ಳಿ: ಇಲ್ಲಿನ ಕುಕ್ಕುಪುಣಿಯಿಂದ ನಾಕುಡೇಲು ಶಾಂತದುರ್ಗಾ ದೇವಸ್ಥಾನಕ್ಕೆ ತೆರಳುವ ಒಂದು ಕಿಲೊಮೀಟರ್ ಲೋಕೋಪಯೋಗಿ ರಸ್ತೆಯ ಪಟ್ಟೆ ಎಂಬಲ್ಲಿ ರಸ್ತೆ ಬದಿ ಗುಡ್ಡ ಕುಸಿದು ಚರಂಡಿ ಬಂದ್ ಆಗಿದೆ.
ಇದರಿಂದ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.ಇದೇ ರೀತಿ ನೀರು ಹರಿದರೆ ಹತ್ತಿರದಲ್ಲಿರುವ ಸೇತುವೆ ಮತ್ತು ರಸ್ತೆ ಬದಿ ಕಟ್ಟಿದ ಕಗ್ಗಲ್ಲು ಕುಸಿದರೆ ರಸ್ತೆಗೆ ಹಾನಿ ಉಂಟಾಗಲಿದೆ. ರಸ್ತೆಯ ಎರಡು ಬದಿ ಗದ್ದೆ ಇರುವುದರಿಂದ ರಸ್ತೆ ಬದಿ ಕುಸಿದರೆ ರಸ್ತೆ ಮತ್ತು ಗದ್ದೆ ಕೃಷಿಗೆ ತೊಂದರೆಯಾಗಲಿದೆ.
ಪ್ರತಿ ಮಳೆಗಾಲದಲ್ಲಿಯೂ ಈ ರಸ್ತೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಇಲ್ಲಿನ ಸಮಸ್ಯೆಯಾಗಲು ಕಾರಣ. ಆದುದರಿಂದ ಇದರ ಬಗ್ಗೆ ಸಂಬಂಧಿಸಿದವರು ಗಮನ ಹರಿಸಿ ಸೂಕ್ತ ಸ್ಪಂದನೆ ನೀಡ ಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.