ಜೂ.29: ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಪುತ್ತೂರು ಶಾಖೆ ಉದ್ಘಾಟನೆ

0

  • ನೂತನ ತಂತ್ರಜ್ಞಾನ,
  • ರೂ. 1.50 ಕೋಟಿ ಲಾಭ,
  • ಸದಸ್ಯರಿಗೆ ಶೇ.20 ಡಿವಿಡೆಂಡ್,
  • ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಸತತ 4ನೇ ಬಾರಿ ಪ್ರಶಸ್ತಿ
  • ಪ್ರಧಾನ ಕಚೇರಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಕ್ ಎಟಿಂ
  • ಸಂಘದ ವೆಬ್‌ಸೈಟ್, ಸಹಕಾರಿ ಆಪ್
  • ಕೋರ್ ಬ್ಯಾಂಕಿಂಗ್ ಸೌಲಭ್ಯ

ಪುತ್ತೂರು: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ 6ನೇ ನೂತನ ಶಾಖೆಯು ಪುತ್ತೂರು ಮುಖ್ಯರಸ್ತೆ ಬೊಳುವಾರು ಜಿ.ಎಲ್. ಟ್ರೇಡ್ ಸೆಂಟರ್‌ನಲ್ಲಿ ಜೂ.29ರಂದು ಬೆಳಗ್ಗೆ ಗಂಟೆ 10ಕ್ಕೆ ಉದ್ಘಾಟನೆಗೊಳ್ಳಲಿದೆ.


ನೂತನ ತಂತ್ರಜ್ಞಾನವನ್ನೊಳಗೊಂಡ ಸಂಘದ ನೂತನ ಶಾಖೆಯನ್ನು ಸಂಘದ ಅಧ್ಯಕ್ಷರಾಗಿರುವ ಮಾಜಿ ಮಂತ್ರಿ ಜೆ ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಲಿದ್ದಾರೆ. ಜಿ.ಎಲ್ ಗ್ರೂಪ್‌ನ ಅದ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ಅವರು ದೀಪ ಪ್ರಜ್ವಲನೆಯನ್ನು ಮಾಡಲಿದ್ದಾರೆ. ರಾಮ ಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆಮ್ಮಿಂಜೆ, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕರಿಯಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಸಂಘವು 5 ಶಾಖೆಗಳನ್ನು ಹೊಂದಿದ್ದು, ಸಂಘವು, ಸದಸ್ಯರ ಸಂಪೂರ್ಣ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘವು 2023-24 ನೇ ಸಾಲಿನಲ್ಲಿ 1.50 ಕೋಟಿ ರೂಪಾಯಿ ಲಾಭಗಳಿಸಿದ್ದು, ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ನೀಡಲಾಗಿದೆ. ಸಾಲ ಹಾಗೂ ಠೇವಣೆಗಳಿಗೆ ಆಕರ್ಷಕ ಬಡ್ಡಿ ನೀಡಿ ಅಧಿಕ ಲಾಭಗಳಿಸಿದೆ. ಠೇವಣಿ ಸಂಗ್ರಹದಲ್ಲೂ ಸಂಘವು ಗಮರ್ನಾಹ ಸಾಧನೆ ಮಾಡಿದೆ. ಸತತ 4 ನೇ ಬಾರಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಪ್ರಶಸ್ತಿ ಪಡೆದು ಪ್ರಧಾನ ಕಚೇರಿಯ ಸ್ವಂತ ಕಟ್ಟಡ ಹೊಂದಿದ್ದು, ಎಚ್ ಡಿ ಎಫ್ ಸಿ ಬ್ಯಾಂಕ್ ಎಟಿಯಂ ಕೂಡ ಇದ್ದು, ಸಂಘದ ವೆಬ್‌ಸೈಟ್ ಹಾಗೂ ಸಹಕಾರಿ ಆಪ್ ಅಳವಡಿಸಲಾಗಿದೆ.ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಇದ್ದು, ನೂತನ ತಂತ್ರಜ್ಞಾನ ಈಗಾಗಲೇ ಹೊಂದಿದೆ. ಸಂಘವು ಪ್ರಾರಂಭದಿಂದ ಈ ವರೆಗೆ “ಎ” ಶ್ರೇಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ವಿಸ್ತರಣೆ ಮತ್ತು ಆರ್ಥಿಕ ಭದ್ರತೆ ಎಂಬ ಮೌಲ್ಯಾಧಾರಿತ ಸಂಪ್ರದಾಯವನ್ನು ಅನುಸರಿಸುತ್ತಿದೆ.

LEAVE A REPLY

Please enter your comment!
Please enter your name here