ನೆಲ್ಯಾಡಿ: ಪುಚ್ಚೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ವರ್ಷದ ಶಾಲಾ ಸರಕಾರಕ್ಕೆ ಇವಿಎಂ ತಂತ್ರಾಂಶದ ಮೂಲಕ ಚುನಾವಣೆ ನಡೆದು, ಶಾಲಾ ಮುಖ್ಯಮಂತ್ರಿಯಾಗಿ ಎ.ಪಿ.ದವನ್ ಗೌಡ ಹಾಗೂ ಉಪ ಮುಖ್ಯಮಂತ್ರಿಯಾಗಿ ಸಾಕ್ಷಿ ಕೆ. ಚುನಾಯಿತರಾದರು. ವಿರೋಧ ಪಕ್ಷದ ನಾಯಕಿಯಾಗಿ ವೀಕ್ಷಾ ಪಿ.ಎಂ ಆಯ್ಕೆಯಾದರು.
ಉಳಿದಂತೆ ವಿದ್ಯಾಮಂತ್ರಿ-ವರ್ಷ, ಸಾಂಸ್ಕೃತಿಕ ಹಾಗೂ ಶಿಸ್ತುಪಾಲನಾ ಮಂತ್ರಿ-ಸಿಂಚನ, ಕ್ರೀಡಾಮಂತ್ರಿ-ರಕ್ಷಿತ್, ಆರೋಗ್ಯ ಮಂತ್ರಿ- ಚೈತ್ರಿಕಾ ಡಿ.ಕೆ, ಸಮಯ ಪಾಲನಾ ಮಂತ್ರಿ-ದಿಶಾನ್, ತೋಟಗಾರಿಕಾ ಮಂತ್ರಿ-ವಾಟ್ಸನ್, ನೀರಾವರಿ ಹಾಗೂ ಸ್ವಚ್ಛತಾ ಮಂತ್ರಿ- ಉದಯಚಂದ್ರ ಪಿ, ರಕ್ಷಣಾ ಮಂತ್ರಿ-ಎಸ್.ಪಿ.ಭುವನ್ ಗೌಡ, ಆಹಾರ ಮತ್ತು ವಾರ್ತಾ ಪ್ರಸಾರ ಮಂತ್ರಿ-ಕೃತಿಕಾ, ಸಂಸದೀಯ ವ್ಯವಹಾರ ಮಂತ್ರಿ- ಪ್ರಸ್ಮಾ ಹೆಚ್.ಎ., ಸಂಪರ್ಕ ಖಾತೆ ಮಂತ್ರಿ-ಹಿತೇಶ್ ಆಯ್ಕೆಯಾದರು.
ಶಾಲಾ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಮೋಹನ ಪಿ., ಉಪಾಧ್ಯಕ್ಷ ಯಶವಂತ ಟಿ., ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಪಿ., ಪೋಷಕರಾದ ಕುಶಾಲಪ್ಪ, ಸೀತಾಲಕ್ಷ್ಮಿ, ಪ್ರಭಾರ ಮುಖ್ಯ ಗುರು ಪುರಂದರ ಗೌಡ, ಶಿಕ್ಷಕರಾದ ಜಾಹ್ನವಿ, ಯೋಗೀಶ, ದಿನೇಶ್, ರೋಹಿಣಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳಾದ ಲಲಿತ, ಪೂರ್ಣಿಮ ಉಪಸ್ಥಿತರಿದ್ದರು.