ಪುತ್ತೂರು : ತಾಲೂಕು ಸ್ಟೀಲ್ ಫ್ಯಾಬ್ರಿಕೇಶನ್ ಅಸೋಸಿಯೇಷನ್ ಇದರ ತ್ರೈಮಾಸಿಕ ಸಭೆಯು ಮುಕ್ರಂಪಾಡಿ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು. ಪಡೀಲ್ ವಿಘ್ನೇಶ್ವರ ಸ್ಟೀಲ್ ಆ್ಯಂಡ್ ಇಂಜಿನಿಯರಿಂಗ್ ವರ್ಕ್ಸ್ ನ ಮಾಲೀಕ ಸುಧೀರ್ ಶೆಟ್ಟಿ ತೆಂಕಿಲ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಂಬರುವ ದಿನಗಳಲ್ಲಿ ಸಂಘಟನೆಯ ಮುಖೇನ ಹಲವು ಸಮಾಜಮುಖಿ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗುವುದೆಂದು ತೀರ್ಮಾನಿಸಲಾಯಿತು. ಸಣ್ಣ ಕೈಗಾರಿಕಾ ಸಂಘದಿಂದ ಪರವಾನಿಗೆ ಪಡೆಯದೇ ಕಾರ್ಯನಿರ್ವಹಿಸುತ್ತಿರುವವರಿಗೂ ಕೂಡ ಸಂಘಟನೆಯಿಂದ ಸದಸ್ಯತನ ನೀಡುವ ವಿಚಾರಕ್ಕೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಬೆಂಬಲವಿತ್ತರು. ಸಂಘದ ಸದಸ್ಯತನವಿಲ್ಲದೇ ಕಾರ್ಯನಿರ್ವಹಿಸುತ್ತಿರುವವರು ಕೂಡ ಒಂದು ತಿಂಗಳೊಳಗೆ ಸದಸ್ಯತನ ಪಡೆದುಕೊಳ್ಳುವಂತೆ ವಿನಂತಿಸಲಾಯಿತು.
ಸ್ಟೀಲ್ ಫ್ಯಾಬ್ರಿಕೇಷನ್ ಅಸೋಸಿಯೇಷನ್ ನ ಕಾರ್ಯದರ್ಶಿ ದಯಾನಂದ ಗೌಡ ಕೆಮ್ಮಾಯಿ ,ದಿನೇಶ ಜಾಕೋಬ್ ಡಿಸೋಜಾ , ಸತ್ಯಪ್ರಸಾದ್ , ಲಕ್ಸ್ಮಿಕಾಂತ್ , ವಿನಯ ಕುಮಾರ್, ಕೃಷ್ಣ , ಹ್ಯಾರಿಸ್ ಸಾಲ್ಮರ , ರುಕ್ಮಯ್ಯ , ಸುರೇಶ , ಸತೀಶ , ಲಿಯೋ ಮಾರ್ಟೀನ್ , ಮೋಹನ್ ಗೌಡ ಉಪಸ್ಥಿತರಿದ್ದರು.ಸುಧೀರ್ ಶೆಟ್ಟಿ ಸ್ವಾಗತಿಸಿ ,ಕಾರ್ಯದರ್ಶಿ ದಯಾನಂದ ಗೌಡ ವಂದಿಸಿದರು.
ಪರವಾನಿಗೆ ಪಡೆಯದೇ ವೆಲ್ಡಿಂಗ್ ಕೆಲಸ ಮಾಡುತ್ತಿರುವ ಅಸಂಘಟಿತ ಸದಸ್ಯರು ಒಂದು ತಿಂಗಳು ಒಳಗೆ ಸ್ಟೀಲ್ ಪ್ಯಾಬ್ರಿಕೇಷನ್ ಅಸೋಸಿಯೇಷನ್ ಸದಸ್ಯರಾಗಬಹುದು. ಆಸಕ್ತರು ಮೊಬೈಲ್ 9341195262 ಅಥವಾ 9741026599 ಸಂಪರ್ಕಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.