ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಮಾದಕ ವಸ್ತುಗಳ ಬಳಕೆಯ ವಿರುದ್ಧ ಅರಿವು ಕಾರ್ಯಕ್ರಮ

0

ಸವಣೂರು: ವಿದ್ಯಾರಶ್ಮಿ ವಿದ್ಯಾಲಯದಲ್ಲ್ಲಿ ಜೂ.26ರಂದು ಮಾದಕ ವಸ್ತುಗಳ ಬಳಕೆಯ ದುರುಪಯೋಗ ಮತ್ತು ಅಕ್ರಮ ಕಳ್ಳಸಾಗಾಣಿಕೆಯ ವಿರುದ್ಧ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ, ಮಾದಕ ವಸ್ತುಗಳ ಬಳಕೆಯ ವಿರುದ್ಧ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಳ್ಳಾರೆ ಪೋಲಿಸ್ ಠಾಣೆಯ ಎಸ್ ಐ ಈರಯ್ಯ ರವರು ವಿದ್ಯಾರ್ಥಿಗಳಿಗೆ ”ದುಶ್ಚಟದತ್ತ ವಾಲದಿರಿ, ಜ್ಞಾನಾರ್ಜನೆ ಕಡೆ ಲಕ್ಷ್ಯವಿರಲಿ’ ಎಂದು ಹಿತವಚನ ಮೂಲಕ ಅರಿವು ಮೂಡಿಸಿದರು. ಬಳಿಕ ವಿದ್ಯಾರ್ಥಿಗಳು ʼನಶಮುಕ್ತ ಭಾರತ ಅಭಿಯಾನʼದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

LEAVE A REPLY

Please enter your comment!
Please enter your name here