ಇಳಕಲ್‌ನ ಎಸ್.ಬಿ.ಕೂಡಲಗಿ ಪುತ್ತೂರು ತಹಸಿಲ್ದಾರ್

0

ಪುತ್ತೂರು:ಪುತ್ತೂರು ತಾಲೂಕಿನ ನೂತನ ತಹಸಿಲ್ದಾರ್ ಆಗಿ ಎಸ್.ಬಿ.ಕೂಡಲಗಿ ಅವರನ್ನು ಸರಕಾರ ವರ್ಗಾವಣೆ ಮಾಡಿದೆ.

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನಲ್ಲಿ ಗ್ರೇಡ್-1 ತಹಸಿಲ್ದಾರ್ ಆಗಿದ್ದ ಇವರನ್ನು ಇದೀಗ ಪುತ್ತೂರು ತಾಲೂಕು ಗ್ರೇಡ್-1 ತಹಸಿಲ್ದಾರ್ ಆಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.

ರಾಜ್ಯದ ವಿವಿಧ ತಾಲೂಕಿನ 34 ತಹಸಿಲ್ದಾರರನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ(ಸೇವೆಗಳು-3 ಮತ್ತು ವಿ.ನಿ.)ಮುಕ್ತಾರ್ ಪಾಷ ಹೆಚ್.ಜಿ.ಅವರು ಜೂ.26ರಂದು ಆದೇಶ ಮಾಡಿದ್ದಾರೆ.

ಪುತ್ತೂರಿನಲ್ಲಿ ಕಳೆದೊಂದು ವರ್ಷದಿಂದ ತಹಸಿಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರಂದರ ಹೆಗ್ಡೆ ಅವರು ಮೇ 31ರಂದು ವಯೋನಿವೃತ್ತಿ ಹೊಂದಿದ್ದರು.ಆ ಬಳಿಕ ಸಹಾಯಕ ಕಮಿಷನರ್ ಕಚೇರಿಯಲ್ಲಿ ಗ್ರೇಡ್ 2 ತಹಸಿಲ್ದಾರ್ ಆಗಿದ್ದ ನಾಗರಾಜ್ ಅವರು ಹೆಚ್ಚುವರಿಯಾಗಿ ತಹಸಿಲ್ದಾರ್ ಅವರ ಪ್ರಭಾರ ನಿರ್ವಹಿಸುತ್ತಿದ್ದರು.ಇದೀಗ, ತೆರವಾಗಿರುವ ಹುದ್ದೆಗೆ ಎಸ್.ಬಿ.ಕೂಡಲಗಿ ಅವರು ನೇಮಕಗೊಂಡಿದ್ದಾರೆ.

LEAVE A REPLY

Please enter your comment!
Please enter your name here