ಹನುಮಗಿರಿ ಶ್ರೀ ಗಜಾನನ ಆ.ಮಾ ಶಾಲೆಯ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ

0

ಈಶ್ವರಮಂಗಲ:ಈಶ್ವರಮಂಗಲ ಹನುಮಗಿರಿ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಜೂ.26ರಂದು ನಡೆಯಿತು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಶಾಲಾ ಪ್ರಾಂಶುಪಾಲ ಕೆ ಶಾಮಣ್ಣ ಉದ್ಘಾಟಿಸಿ, ವಿದ್ಯಾರ್ಥಿ ನಾಯಕರಿಗೆ ಶಾಲೆಯಲ್ಲಿ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕೆಂದು ತಿಳಿಸಿದರು. ಮುಖ್ಯ ಶಿಕ್ಷಕಿ ಸೌಮ್ಯ ಎ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸ್ಪೀಕರ್ ವಿದ್ಯಾರ್ಥಿನಿ ತಶ್ವಿ ಶೆಟ್ಟಿ ಪ್ರಮಾಣ ವಚನ ಸ್ವೀಕರಿಸಿ, ಇತರ ನಾಯಕರಿಗೆ ಪ್ರಮಾಣವಚನ ಬೋಧಿಸಿದರು.ಪ್ರೌಢ ವಿಭಾಗದ ಶಾಲಾ ನಾಯಕನಾಗಿ ಮೃದುಲ್ ಬಿ, ಉಪನಾಯಕನಾಗಿ ಶ್ರೀಷ ಪಿ ಕೆ, ಗೃಹ ಮಂತ್ರಿಯಾಗಿ ಎಚ್ ಸಾತ್ವಿಕ್, ಶಿಸ್ತುಗಾರಿಕಾ ಮಂತ್ರಿ ರಿಯಾ ಬಿನೋಯ್, ಸಮರ್ಥ್, ಆಡಳಿತ ಮಂತ್ರಿಯಾಗಿ ಧರಣಿ ,ಅಖಿಲ್ ಬಿ ಸಿ, ಆಹಾರ ಮಂತ್ರಿಗಳಾಗಿ ಪರೇಶ್, ಸಾನಿಕ ,ನೀರು ಮತ್ತು ತೋಟಗಾರಿಕಾ ಮಂತ್ರಿಗಳಾಗಿ ಹರಿ ಕಿಶನ್ ,ಹಸ್ತ ಬಿ ,ಶಿಕ್ಷಣ ಮಂತ್ರಿಗಳಾಗಿ ಅನನ್ಯ ಎ ,ಅನಘ ಎಮ್,ವಾರ್ತಾ ಮತ್ತು ಸಮೂಹ ಮಾಧ್ಯಮ ಮಂತ್ರಿಗಳಾಗಿ ಆಯುಷ್ ಎಂ, ದಿಶಾ, ಆರೋಗ್ಯ ಮಂತ್ರಿಗಳಾಗಿ ಶ್ರೀಯ ಮತ್ತು ಮನ್ವಿತ್,ಕ್ರೀಡಾ ಮಂತ್ರಿಗಳಾಗಿ ಸೃಷ್ಟಿ ಎಸ್ ರೈ,ಪ್ರಥಮ್ ಸಾಂಸ್ಕೃತಿಕ ಮಂತ್ರಿಗಳಾಗಿ ಕಾವ್ಯ ಜಿ ರಾವ್, ಸಾರಿಗೆ ಮಂತ್ರಿಗಳಾಗಿ ಜ್ಞಾನೇಶ್, ಭವಿಷ್, ವಿರೋಧ ಪಕ್ಷದ ನಾಯಕರಾಗಿ ಅನಘ ಪಿ,ತನ್ಮಯ್ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ವಿಭಾಗದ ಶಾಲಾ ನಾಯಕನಾಗಿ ತನಯ್ ಭರತ್,ಉಪನಾಯಕಿಯಾಗಿ ಅಪರ್ಣ ಎ, ಗೃಹ ಮಂತ್ರಿಯಾಗಿ ತನ್ವಿ, ಶಿಸ್ತು ಪಾಲನಾ ಮಂತ್ರಿಯಾಗಿ ಧೃತಿ ಕೆ, ಆಡಳಿತ ಮಂತ್ರಿಯಾಗಿ ಪೂರ್ವಿ ವಿ ಎಸ್ ಭಟ್, ಆಹಾರ ಮಂತ್ರಿಯಾಗಿ ತ್ವಿಷ ವಿ ಎಚ್,ಅನಘ, ನೀರು ಮತ್ತು ತೋಟಗಾರಿಕಾ ಮಂತ್ರಿಯಾಗಿ ಪೃಥ್ವಿ ಕೆ ಹೆಚ್ ,ಸ್ವಾತಿ ಕೆ ,ಶಿಕ್ಷಣ ಮಂತ್ರಿಯಾಗಿ ಸಾನ್ವಿ ರೈ ಸಿ ಹೆಚ್, ಮಾನ್ಯ ,ವಾರ್ತಾ ಮತ್ತು ಸಮೂಹ ಮಾಧ್ಯಮ ಮಂತ್ರಿಯಾಗಿ ಸನ್ನಿಧಿ, ಆರೋಗ್ಯಮಂತ್ರಿಯಾಗಿ ಸಾನ್ವಿ, ಕ್ರೀಡಾ ಮಂತ್ರಿಯಾಗಿ ರಕ್ಷಾ ಬಿ ಆರ್, ಸಾಂಸ್ಕೃತಿಕ ಮಂತ್ರಿಯಾಗಿ ಪ್ರತೀತಿ, ಸಾರಿಗೆ ಮಂತ್ರಿಯಾಗಿ ಶಹಬಿ ,ಶ್ಲೋಕ್ ಕುಮಾರ್, ವಿರೋಧ ಪಕ್ಷದವರಾಗಿ ತಮನ್ ಎ, ಜನ್ಯ ಜೆ, ವಿಶ್ರವ ಆರ್ ಕೆ ಪ್ರಮಾಣವಚನ ಸ್ವೀಕಾರ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲತಾ ಡಿ ಕೆ ಉಪಸ್ಥಿತರಿದ್ದರು .ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಮಾನ್ಯ ಸ್ವಾಗತಿಸಿ, ಅಪೂರ್ವ ಮತ್ತು ಬಳಗ ಪ್ರಾರ್ಥಿಸಿ, ವಿಶ್ಮ ರೈ ವಂದಿಸಿ, ಅನಾಮಿಕ ನಿರೂಪಿಸಿದರು.

LEAVE A REPLY

Please enter your comment!
Please enter your name here