ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

0

ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದ ವತಿಯಿಂದ ಊರ, ಪರವೂರ ಸಹೃದಯ ದಾನಿಗಳ ಸಹಕಾರದಿಂದ ಕಿಡ್ನಿ, ಡಯಾಲಿಸಿಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಸೇವಾಶ್ರಮದಲ್ಲಿ ನಡೆಯಿತು.

ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಶ್ರೀಹನುಮಾನ್ ಮಂದಿರ ಸಾಂತ್ವನ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಮಂಜುನಾಥ್ ಎಮ್. ನಗರಸಭಾ ಸದಸ್ಯ ಪ್ರೇಮಲತಾ ನಂದಿಲ, ನಿವೃತ್ತ ಶಿಕ್ಷಕ ಬೊಮ್ಮಾಯಿ ಬಂಗೇರ, ನಿವೃತ್ತ ಶಿಕ್ಷಕಿ ರೇವತಿ ಹಾಗೂ ಅನುಪಮಾರವರು ಮಾತನಾಡಿ ಸಾಂತ್ವನ ಸೇವಾಶ್ರಮದಿಂದ ಬಡ ಜನರಿಗೆ ನೀಡುವ ಆಹಾರ ಕಿಟ್ ವಿತರಣಾ ಕಾರ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸೇವಾಶ್ರಮದ ಅಧ್ಯಕ್ಷೆ ಶೋಭಾ ಮಾತನಾಡಿ ಇದು 8ನೇ ವರ್ಷದ 37ನೇ ಕಾರ್ಯಕ್ರಮ. ಈ ಕಾರ್ಯಕ್ರಮ ಪ್ರತೀ ತಿಂಗಳೂ ನಡೆಯುತ್ತಿದೆ. ಹಲವಾರು ದಾನಿಗಳು ಆಹಾರ ಕಿಟ್ ವಿತರಣೆಗೆ ಕೈಜೋಡಿಸಿದ್ದಾರೆ. ಅಲ್ಲದೆ ನಮ್ಮ ಟ್ರಸ್ಟ್‌ನ 12 ಸದಸ್ಯರು ಕಾರ್ಯಚಟುಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. 5 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆಹಾರ ಕಿಟ್ ವಿತರಿಸಲಾಯಿತು. ಕಿಟ್ ಸ್ವೀಕರಿಸಿದ ಫಲಾನುಭವಿಗಳಾದ ಅನಿತಾ ವಿಟ್ಲ, ಕುಸುಮಾ, ಪುಷ್ಪಾವತಿ, ವೀರೇಂದ್ರ ಜೈನ್ ಹಾಗೂ ಚಂದ್ರಕಲಾರವರು ಅನಿಸಿಕೆ ವ್ಯಕ್ತಪಡಿಸಿದರು. ಕಲಾವಿದ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಿಕಾ ಮತ್ತು ಭುವನ ಪ್ರಾರ್ಥಿಸಿ ರಾಧಿಕಾ ಸ್ವಾಗತಿಸಿದರು. ವನಿತಾ ವಂದಿಸಿ ಗುರುರಾಜ್ ಕುಕ್ಕಿಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here