ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಮಾಜಿ ಮಂತ್ರಿ ಜೆ ಕೃಷ್ಣ ಪಾಲೇಮಾರ್ ಅವರು ಜೂ.29ರಂದು ಬೆಳಗ್ಗೆ ಭೇಟಿ ನೀಡಿ ಪ್ರಾರ್ಥನೆ ಮಾಡಿದರು.
ಶ್ರೀ ಲಕ್ಷ್ಮಣಾನಂದ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಅವರು ಪುತ್ತೂರಿನಲ್ಲಿ 6ನೇ ಶಾಖೆ ಉದ್ಘಾಟನೆಗೊಳ್ಳುವ ಸಂದರ್ಭ ಅದರ ಯಶಸ್ವಿಗಾಗಿ ಅವರು ಪ್ರಾರ್ಥನೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಭಾಷ್ ರೈ ಬೆಳ್ಳಿಪ್ಪಾಡಿ, ವಿನಯ ಸುವರ್ಣ ಮಾಜಿ ಮಂತ್ರಿಯನ್ನು ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಸಾದ ವಿತರಿಸಿದರು.